ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಭಿತ್ತಿಪತ್ರ ಬಿಡುಗಡೆ

On: September 3, 2026 9:50 AM
Follow Us:

ಸಿರಿಗೆರೆ: ಸಮಾಜದ ಅಜ್ಞಾನಕ್ಕೆ ಜ್ಞಾನದ ಬೆಳಕು, ಅಸಮಾನತೆಗೆ ಸಮತೆಯ ದಾರಿ, ಹಸಿದವರಿಗೆ ಅನ್ನ, ನಿರ್ಗತಿಕರಿಗೆ ಆಸರೆ ಹಾಗೂ ಗ್ರಾಮೀಣ ಜನತೆಗೆ ಅಕ್ಷರದ ಬೆಳಕು ನೀಡಿದ ಸಮಾಜಾಭ್ಯುದಯದ ನಿರ್ಮಾತೃ, ಶತಮಾನದ ಸಂತಶ್ರೇಷ್ಠ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20ನೇ ಪೀಠಾಧಿಪತಿಗಳಾದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ, ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಪುಣ್ಯಸ್ಮರಣೆಯ ಅಂಗವಾಗಿ ಶ್ರದ್ಧಾಂಜಲಿ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಗಿದೆ.

ಬಸವತತ್ತ್ವವನ್ನು ಕೇವಲ ಬೋಧಿಸುವುದಕ್ಕೆ ಸೀಮಿತವಾಗದೆ, ಅದನ್ನು ತಮ್ಮ ಬದುಕಿನಲ್ಲಿಯೇ ಅಳವಡಿಸಿಕೊಂಡಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕಾಯಕ, ದಾಸೋಹ, ಸಮಾನತೆ, ಮಾನವೀಯತೆ, ಜ್ಞಾನ ಹಾಗೂ ವೈಚಾರಿಕತೆಯನ್ನು ಸಮಾಜಮುಖಿ ಬದುಕಿನ ಧ್ಯೇಯವನ್ನಾಗಿಸಿಕೊಂಡಿದ್ದರು. ಅವರ ಜೀವನ ಮತ್ತು ಕಾರ್ಯಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ.

ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಕ್ಷಣದ ಬೆಳಕು ಹರಡಬೇಕು ಎಂಬ ದೂರದೃಷ್ಟಿಯಿಂದ ಅವರು ಕೈಗೊಂಡ ಶೈಕ್ಷಣಿಕ ಕಾರ್ಯಗಳು ಮಹತ್ವದ ಮೈಲಿಗಲ್ಲುಗಳಾಗಿವೆ. ಶಿಕ್ಷಣದ ಜೊತೆಗೆ ಸಾಹಿತ್ಯ, ಸಂಸ್ಕೃತಿ, ವಚನಪ್ರಸಾರ, ಸಾಮಾಜಿಕ ಸಮಾನತೆ ಹಾಗೂ ಜನಜಾಗೃತಿಯ ಕ್ಷೇತ್ರಗಳಲ್ಲಿಯೂ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ಅವರು ಬಿತ್ತಿದ ಮೌಲ್ಯಗಳು ಹಾಗೂ ರೂಪಿಸಿದ ಸಂಸ್ಥೆಗಳು ಅವರ ಸಮಾಜಮುಖಿ ಚಿಂತನೆಗೆ ಜೀವಂತ ಸಾಕ್ಷಿಗಳಾಗಿವೆ.

ಅವರ ದೃಷ್ಟಿಯಲ್ಲಿ ಧರ್ಮವೆಂದರೆ ಕೇವಲ ಆಚರಣೆ ಮಾತ್ರವಲ್ಲ; ಅದು ಮಾನವೀಯತೆ, ಸೇವೆ, ಸಮಾನತೆ ಮತ್ತು ಸಮಾಜದ ಒಳಿತಿನೊಂದಿಗೆ ಬೆಸೆದುಕೊಂಡ ಜೀವನಮಾರ್ಗವಾಗಿತ್ತು. ಜಾತಿ, ವರ್ಗ, ಬಡತನ ಮತ್ತು ಅಜ್ಞಾನದಿಂದ ಉಂಟಾಗುವ ಅಸಮಾನತೆಗಳನ್ನು ದೂರಗೊಳಿಸಿ, ಪ್ರತಿಯೊಬ್ಬರಿಗೂ ಗೌರವಯುತ ಬದುಕು ದೊರೆಯಬೇಕು ಎಂಬ ಆಶಯದೊಂದಿಗೆ ಅವರು ತಮ್ಮ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿದ್ದರು.

ಭೌತಿಕವಾಗಿ ಗುರುಗಳು ನಮ್ಮೊಂದಿಗಿಲ್ಲದಿದ್ದರೂ, ಅವರ ಚಿಂತನೆ, ಆದರ್ಶ, ವಚನಸಂದೇಶ ಮತ್ತು ಸಮಾಜಮುಖಿ ಸೇವೆಯ ಬೆಳಕು ಎಂದಿಗೂ ನಂದುವುದಿಲ್ಲ. ಅವರ ಜೀವನ ಸಂದೇಶಗಳು ಇಂದಿನ ಹಾಗೂ ಮುಂದಿನ ಪೀಳಿಗೆಗಳಿಗೂ ದಾರಿದೀಪವಾಗಿವೆ.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಪುಣ್ಯಸ್ಮರಣೆಯ ಅಂಗವಾಗಿ ಸೆಪ್ಟೆಂಬರ್ 24ರಂದು ಸಿರಿಗೆರೆಯಲ್ಲಿ ಶ್ರದ್ಧಾಂಜಲಿ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆಗೊಂಡಿರುವ ಶ್ರದ್ಧಾಂಜಲಿ ಭಿತ್ತಿಪತ್ರವು ಕೇವಲ ಸ್ಮರಣೆಯ ಸಂಕೇತವಾಗಿರದೆ, ಮಹಾಗುರುವಿನ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನುಡಿನಮನದ ದೀಪವಾಗಿದೆ.

“ಶಿವಕುಮಾರರೆಂಬ ಕ್ರಾಂತಿಯ ಜ್ಯೋತಿಗೆ ಕೊನೆಯೆಂಬುದಿಲ್ಲ, ಸಾವೆಂಬುದಿಲ್ಲ; ಅದು ಜನಮಾನಸದ ಹೃದಯದಲ್ಲಿ ಎಂದೆಂದಿಗೂ ಬೆಳಗುವ ಅಮರ ಜ್ಯೋತಿ.”

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪವಿತ್ರ ಸ್ಮರಣೆಗೆ ಶ್ರದ್ಧಾ–ಭಕ್ತಿಪೂರ್ವಕ ನಮನಗಳು.

K.M.Sathish Gowda

Join WhatsApp

Join Now

Facebook

Join Now

Read more

ಫಿಲಡೆಲ್ಫಿಯಾದಲ್ಲಿ ಕನ್ನಡದ ಹಬ್ಬ; ಸಾಗರದಾಚೆ ಮೊಳಗಲಿದೆ ಕನ್ನಡದ ಕಂಪು: ಅಕ್ಕ ರಜತೋತ್ಸವಕ್ಕೆ ಶ್ರೀ ತರಳಬಾಳು ಜಗದ್ಗುರುಗಳ ಅಮೆರಿಕಾ ಪಯಣ

ಆಧ್ಯಾತ್ಮಿಕ ಜ್ಞಾನದಿಂದ ಮನಸ್ಸಿಗೆ ನೆಮ್ಮದಿ; ರಾಗ-ದ್ವೇಷದ ಬಂಧನದಿಂದ ಮುಕ್ತಿಯೇ ನಿಜವಾದ ಶಾಂತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಶ್ರಾವಣ ಚಿಂತನ – 2026; ಶರಣರ ಆದರ್ಶ, ಕಾಯಕ ಸಿದ್ಧಾಂತವೇ ನಿಜವಾದ ‘ಅಭಿವ್ಯಕ್ತಿ’: ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು

ಅರಿತು ಬಾಳುವುದರಲ್ಲಿ ಜೀವನದ ಸಾರ್ಥಕತೆ; ಧರ್ಮದ ಹಾದಿಯಲ್ಲಿ ನಡೆದರೆ ಬದುಕಿನಲ್ಲಿ ಸುಖ-ಶಾಂತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಪರಿಸರ ಸಂರಕ್ಷಣೆಯ ಜೊತೆಗೆ ಮಾನವೀಯ ಮೌಲ್ಯಗಳ ರಕ್ಷಣೆಯೂ ಅಗತ್ಯ: ಬೆಕ್ಕಿನಕಲ್ಮಠ ಶ್ರೀಗಳು

ಗುರುವಿನ ಜ್ಞಾನವೇ ಅಮರ ಸಂಪತ್ತು; ರೇಣುಕಾಚಾರ್ಯರ ಸಂದೇಶ ಸಮಾಜಕ್ಕೆ ಸಂಜೀವಿನಿ: ಶ್ರೀ ರಂಭಾಪುರಿ ಜಗದ್ಗುರು

Leave a Comment