ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಮಳೆಯ ಅಬ್ಬರ: ಅಡಿಕೆ-ತೆಂಗಿನ ತೋಟಗಳಿಗೆ ಭಾರಿ ಹಾನಿ;’ರಾಷ್ಟ್ರೀಯ ಪ್ರಕೃತಿ ವಿಕೋಪ’ ಎಂದು ಘೋಷಿಸಿ – ಹೆಚ್.ಆರ್. ಬಸವರಾಜಪ್ಪ ಆಗ್ರಹ

On: April 27, 2026 8:11 PM
Follow Us:

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಮತ್ತು ಕೂಡ್ಲಿಗೆರೆ ಹೋಬಳಿಗಳಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಬಿರುಗಾಳಿಯು ರೈತರ ಬದುಕನ್ನು ಬೀದಿಗೆ ತಂದಿದೆ. ಹಿಂದೆಂದೂ ಕಂಡರಿಯದ ಈ ನೈಸರ್ಗಿಕ ವಿಕೋಪವನ್ನು ‘ರಾಷ್ಟ್ರೀಯ ಪ್ರಕೃತಿ ವಿಕೋಪ’ ಎಂದು ಘೋಷಿಸಿ, ಸಂತ್ರಸ್ತರಿಗೆ ತಕ್ಷಣವೇ ಗರಿಷ್ಠ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೊಳೆಹೊನ್ನೂರು ಹೋಬಳಿಯ ಬಹುತೇಕ ಎಲ್ಲಾ ಗ್ರಾಮಗಳು ಹಾಗೂ ಕೂಡ್ಲಿಗೆರೆ ಹೋಬಳಿಯ ಹಲವು ಹಳ್ಳಿಗಳಲ್ಲಿ ಪ್ರಕೃತಿಯ ವಿಕೋಪಕ್ಕೆ ರೈತರು ಕಂಗಾಲಾಗಿದ್ದಾರೆ. ಅಡಿಕೆ, ತೆಂಗು, ಬಾಳೆ ಹಾಗೂ ತೇಗದ ಮರಗಳು ಬುಡಸಮೇತ ಉರುಳಿವೆ. ಸರಾಸರಿ ಒಂದು ಎಕರೆಯಲ್ಲಿದ್ದ 600 ಮರಗಳ ಪೈಕಿ 300ಕ್ಕೂ ಹೆಚ್ಚು ಮರಗಳು ನೆಲಸಮವಾಗಿವೆ. ಇದು ಕೇವಲ ಬೆಳೆ ಹಾನಿಯಲ್ಲ, ರೈತರ ದಶಕಗಳ ಪರಿಶ್ರಮ ಹಾಗೂ ಭವಿಷ್ಯದ ಆದಾಯದ ಮೂಲವೇ ಕಸಿದುಕೊಂಡಂತಾಗಿದೆ.

ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿವೆ. ಸಂಜೆ 6 ಗಂಟೆಯಿಂದ ಮರುದಿನ ಮಧ್ಯಾಹ್ನದವರೆಗೆ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಇಡೀ ಭಾಗವು ಕತ್ತಲೆಯಲ್ಲಿ ಮುಳುಗಿದ್ದು, ಜನರ ಜನಜೀವನ ದುಸ್ತರವಾಗಿದೆ.

  1. ಜಿಲ್ಲಾಧಿಕಾರಿಗಳ ವರದಿ: ಜಿಲ್ಲಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಸಮೀಕ್ಷೆ ನಡೆಸಿ, ಇದನ್ನು ‘ರಾಷ್ಟ್ರೀಯ ಪ್ರಕೃತಿ ವಿಕೋಪ’ ಎಂದು ಪರಿಗಣಿಸಲು ಕೇಂದ್ರಕ್ಕೆ ವರದಿ ಕಳುಹಿಸಬೇಕು.
  2. ರಾಜ್ಯ ಸರ್ಕಾರದ ನಿರ್ಣಯ: ರಾಜ್ಯ ಸರ್ಕಾರವು ವಿಶೇಷ ಸಂಪುಟ ಸಭೆಯ ಮೂಲಕ ಈ ಭಾಗದ ಹಾನಿಯನ್ನು ರಾಷ್ಟ್ರೀಯ ವಿಕೋಪವೆಂದು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು.
  3. ತಕ್ಷಣದ ಪರಿಹಾರ: ಮನೆ ಕಳೆದುಕೊಂಡವರಿಗೆ ಮತ್ತು ಬೆಳೆ ಕಳೆದುಕೊಂಡ ರೈತರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣದ ಪರಿಹಾರ ಧನ ವಿತರಿಸಬೇಕು.

​ರೈತರು ಕಷ್ಟಪಟ್ಟು ಬೆಳೆಸಿದ ತೋಟಗಳು ಕಣ್ಣೆದುರೇ ಮಣ್ಣು ಪಾಲಾಗಿವೆ. ಇದು ಕೇವಲ ಮಳೆಯಲ್ಲ, ರೈತರ ಪಾಲಿನ ಮೃತ್ಯು ಬಂದಂತಾಗಿದೆ. ಸರ್ಕಾರ ಕೇವಲ ಭರವಸೆ ನೀಡದೆ, ಸಮರೋಪಾದಿಯಲ್ಲಿ ಸ್ಪಂದಿಸಬೇಕು ಎಂದು ಹೆಚ್.ಆರ್. ಬಸವರಾಜಪ್ಪ ಅವರು ಆಗ್ರಹಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಸಾವಿರಾರು ಅಡಿಕೆ ಮರಗಳು: ಭದ್ರಾವತಿ ತಾಲ್ಲೂಕಿನಾದ್ಯಂತ ಅಪಾರ ಹಾನಿ – ತಕ್ಷಣದ ಪರಿಹಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಗ್ರಹ

ಶಿವಮೊಗ್ಗದಲ್ಲಿ ಮೇ 3 ರಂದು ‘ಪತ್ರಕರ್ತರ ಧ್ವನಿ’ ಸಂಘದ 2ನೇ ವಾರ್ಷಿಕೋತ್ಸವ: ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ

ಮಕ್ಕಳ ಸಾಧನೆಯನ್ನು ಹಗುರವಾಗಿ ಮಾತನಾಡುವುದು ಸರಿಯಲ್ಲ: ಬೊಮ್ಮಾಯಿ, ವಿಶ್ವನಾಥ್‌ಗೆ ಮಧು ಬಂಗಾರಪ್ಪ ತಿರುಗೇಟು

ಬಿ.ಎಸ್.ವೈ ಅಭಿಮಾನೋತ್ಸವ: ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳಿಗೆ ವಿಜಯೇಂದ್ರ, ಕಾರಜೋಳ ಅವರಿಂದ ಅಧಿಕೃತ ಆಹ್ವಾನ

ಚಿತ್ರದುರ್ಗದ ಪುಣ್ಯಭೂಮಿಯಲ್ಲಿ ಬಿಎಸ್‍ವೈ ‘ಅಭಿಮಾನೋತ್ಸವ’: ಐದು ದಶಕಗಳ ಜನಪರ ಹೋರಾಟಕ್ಕೊಂದು ಗೌರವ ನಮನ

ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ವಿಚಾರ: ಜನರಲ್ಲಿ ಅನಾವಶ್ಯಕ ಆತಂಕ ಬೇಡ – ಪರಿಸರ ಹಾನಿಗೆ ನಮ್ಮ ಸ್ಪಷ್ಟ ವಿರೋಧ : ಸಂಸದ ಬಿ.ವೈ. ರಾಘವೇಂದ್ರ

Leave a Comment