ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

3 ವರ್ಷಕ್ಕೆ ₹100 ಕೋಟಿ ಪೋಲು; ಏನೂ ಕೆಲಸ ಮಾಡದ ಗ್ಯಾರಂಟಿ ಸಮಿತಿ ನಮಗೆ ಬೇಕೇ? ಸರಕಾರದ ವಿರುದ್ಧ ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ವಾಗ್ದಾಳಿ!

On: June 16, 2026 8:19 PM
Follow Us:

​ಬೆಂಗಳೂರು: ರಾಜ್ಯ ಸರಕಾರವು ಪ್ರತಿಷ್ಠಿತವಾಗಿ ರಚಿಸಿರುವ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ಯು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದೆಯೇ ಹೊರತು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಅವರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ಸಮಿತಿಗಳಿಗಾಗಿ ಸರಕಾರ ಬರೋಬ್ಬರಿ 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

​ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಆಡಳಿತ ವೈಖರಿ ಮತ್ತು ಕಾಂಗ್ರೆಸ್ ನಾಯಕರ ನಡೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

📌 “ವರ್ಷಕ್ಕೆ 35 ಕೋಟಿ ಖರ್ಚು; ಸಾಧನೆ ಶೂನ್ಯ”

ಗ್ಯಾರಂಟಿ ಅನುಷ್ಠಾನ ಸಮಿತಿಯ ವೈಫಲ್ಯವನ್ನು ಎತ್ತಿ ತೋರಿಸಿದ ಎಸ್. ಪ್ರಕಾಶ್, “ಗೃಹಲಕ್ಷ್ಮಿ ಯೋಜನೆಯಡಿ 3ರಿಂದ 4 ಲಕ್ಷ ಅನರ್ಹರು ಮತ್ತು ಅಪಾತ್ರರ ಹೆಸರನ್ನು ತೆಗೆದುಹಾಕಲು ಸರಕಾರವೇ ಈಗ ಮುಂದಾಗಿದೆ. ಸಮಿತಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಸಮಿತಿಯ ಪದಾಧಿಕಾರಿಗಳಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನೇಮಕಾತಿಗಳನ್ನು ಮಾಡಿ ಸಂಬಳ, ಪ್ರವಾಸ ಭತ್ಯೆ ನೀಡಿ ಸಮೃದ್ಧಿಯಾಗಿ ಪೋಷಿಸಲಾಗುತ್ತಿದೆ. ಈ ಸಮಿತಿಗೆ ವಾರ್ಷಿಕವಾಗಿ 35 ಕೋಟಿ ರೂಪಾಯಿ ಖರ್ಚಾಗುತ್ತಿದೆ” ಎಂದು ವಿವರಿಸಿದರು.

“ಓಡಾಡಲು ಐಷಾರಾಮಿ ಕಾರು, ಸಂಬಳ, ಆಪ್ತ ಸಹಾಯಕರನ್ನು ಹೊಂದಿರುವ ಈ ಸಮಿತಿಯ ಸದಸ್ಯರು ಒಂದೇ ಒಂದು ಅರ್ಹ ಹೆಸರನ್ನು ಯೋಜನೆಗೆ ಸೇರಿಸಿಲ್ಲ ಅಥವಾ ಅನರ್ಹರ ಹೆಸರನ್ನು ರದ್ದು ಮಾಡಲು ಶಿಫಾರಸು ಮಾಡಿಲ್ಲ. ಏನೂ ಕೆಲಸ ಮಾಡದ ಇವರನ್ನು ಸಾರ್ವಜನಿಕರ ತೆರಿಗೆ ಹಣದಲ್ಲಿ ಯಾಕೆ ಸಾಕಬೇಕು?” ಎಂದು ಅವರು ಪ್ರಶ್ನಿಸಿದರು.

ಮುಂದುವರಿದು, ಸಮಿತಿಯ ಉಪಾಧ್ಯಕ್ಷ ಮೆಹ್ರಾಜ್ ಖಾನ್ ಅವರಿಗೆ ಜಯಮಹಲ್‌ನಲ್ಲಿ ಸರಕಾರಿ ನಿವಾಸ ನೀಡಿರುವುದನ್ನು ದಾಖಲೆ ಸಮೇತ ಪ್ರದರ್ಶಿಸಿದ ಅವರು, “ಮೇಲ್ಮನೆ ಮತ್ತು ಕೆಳಮನೆಯ ವಿರೋಧ ಪಕ್ಷದ ನಾಯಕರಿಗೇ ಇನ್ನು ಮನೆ ಸಿಕ್ಕಿಲ್ಲ. ಆದರೆ ಇವರಿಗೆ ಸರಕಾರಿ ನಿವಾಸ ನೀಡಿರುವುದು ದುರಂತ ಮತ್ತು ಅಧಿಕಾರದ ದುರುಪಯೋಗ. ಸರಕಾರ ಕೇವಲ ತನ್ನ ಕಾರ್ಯಕರ್ತರನ್ನು ಸಾಕುವ ಕೃತ್ಯಕ್ಕೆ ಇಳಿದಿದೆ” ಎಂದು ಆಕ್ರೋಶ ಹೊರಹಾಕಿದರು.

🚨 ದಿವಾಳಿ ಘೋಷಿಸಿಕೊಂಡ ನಸೀರ್ ಅಹ್ಮದ್ ವಿರುದ್ಧ ಕ್ರಮಕ್ಕೆ ಆಗ್ರಹ

ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರ ವಿರುದ್ಧ ವಂಚನೆಯ ಗಂಭೀರ ಆರೋಪ ಮಾಡಿದ ಪ್ರಕಾಶ್, “ನಸೀರ್ ಅಹ್ಮದ್ ಅವರು ತಮ್ಮನ್ನು ದಿವಾಳಿ ಎಂದು ಘೋಷಿಸಿಕೊಂಡಿದ್ದಾರೆ. ಇವರು 21 ಟೆಕ್ಸ್‌ಟೈಲ್ ಕಂಪನಿಗಳನ್ನು ಹೊಂದಿದ್ದು, ಸಿಬ್ಬಂದಿಗೆ ಸಂಬಳ, ಇಎಸ್‌ಐ (ESI) ಮತ್ತು ಪಿಎಫ್ (PF) ಹಣವನ್ನು ಪಾವತಿಸಿಲ್ಲ. ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಗಳು ತಮ್ಮ ಸಲಹೆಗಾರರನ್ನಾಗಿ ಇಟ್ಟುಕೊಂಡಿರುವುದು ಅಕ್ಷಮ್ಯ”* ಅಪರಾಧ” ಎಂದರು.

“ಕಂಡ ಕಂಡವರನ್ನೆಲ್ಲ ‘ಚೋರ್’ ಎಂದು ಕರೆಯುವ ರಾಹುಲ್ ಗಾಂಧಿ, ಸ್ವಪಕ್ಷದ ನಾಯಕ ₹1,454 ಕೋಟಿ ವಂಚನೆ ಮಾಡಿದ್ದರೂ ಏಕೆ ಮೌನವಾಗಿದ್ದಾರೆ? ಮತಬ್ಯಾಂಕ್ ರಾಜಕಾರಣ ಬಿಟ್ಟು ನಸೀರ್ ಅಹ್ಮದ್ ಅವರನ್ನು ಕೂಡಲೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಬೇಕು ಮತ್ತು ಕಾರ್ಮಿಕ ಇಲಾಖೆ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.”

ಬ್ಯಾಂಕ್‌ಗಳಿಗೆ ಸುಮಾರು 1,500 ಕೋಟಿ ರೂಪಾಯಿ ವಂಚಿಸಿರುವ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಆಗಲಿ, ರಾಹುಲ್ ಗಾಂಧಿಯವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಅವರು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮೋದಿಯವರನ್ನು ಟೀಕಿಸುವುದರಲ್ಲೇ ಬ್ಯುಸಿಯಾಗಿದ್ದರಿಂದ ಅವರಿಗೆ ಈ ವಂಚನೆ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

🚦 ಸಚಿವಾಕಾಂಕ್ಷಿಗಳ ಬೆಂಬಲಿಗರ ಪ್ರತಿಭಟನೆ: ಸಂಚಾರ ದಟ್ಟಣೆಯಿಂದ ನಾಗರಿಕರ ಪರದಾಟ

ರಾಜಧಾನಿಯಲ್ಲಿ ಸಚಿವಾಕಾಂಕ್ಷಿಗಳ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಗಳಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.

“ಅಧಿಕಾರದ ಆಸೆಗೆ ಬಿದ್ದು ನಗರದ ನಾಗರಿಕರಿಗೆ ತೊಂದರೆ ಕೊಡಬೇಡಿ. ಸಚಿವರನ್ನು ನಿರ್ಧರಿಸುವ ಅಧಿಕಾರ ಹೈಕಮಾಂಡ್ ಕೈಯಲ್ಲಿ ಇರುವುದರಿಂದ ಆಕಾಂಕ್ಷಿಗಳು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಲಿ. ಮುಖ್ಯಮಂತ್ರಿಗಳು ತಕ್ಷಣವೇ ತಮ್ಮ ನಾಯಕರಿಗೆ ನಗರದಲ್ಲಿ ಪ್ರತಿಭಟನೆ ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.”

🌧️ “ಖಾತೆ ಕ್ಯಾತೆಯಲ್ಲಿ ಜವಾಬ್ದಾರಿ ಮರೆತ ಕೃಷ್ಣಭೈರೇಗೌಡರು”

ಬೆಂಗಳೂರು ಅಭಿವೃದ್ಧಿ ಖಾತೆಯ ಸಚಿವರಾಗಿ ನೇಮಕವಾಗಿರುವ ಕೃಷ್ಣಭೈರೇಗೌಡರ ವಿರುದ್ಧವೂ ಪ್ರಕಾಶ್ ಅಸಮಾಧಾನ ಹೊರಹಾಕಿದರು. “ಮಳೆಗಾಲ ಆರಂಭವಾಗಿ ನಗರದಲ್ಲಿ ಮಳೆಯ ಅವಾಂತರಗಳು ಶುರುವಾಗಿವೆ. ಆದರೆ ಸಚಿವ ಕೃಷ್ಣಭೈರೇಗೌಡರು ತಮಗೆ ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ಇಲಾಖೆ ನೀಡಿಲ್ಲ ಎಂಬ ಕಾರಣಕ್ಕೆ ಇನ್ನು ಅಧಿಕಾರ ವಹಿಸಿಕೊಂಡಿಲ್ಲ. ವಿದ್ಯಾವಂತರು, ಬುದ್ಧಿವಂತರು ಎಂದು ಹಣೆಪಟ್ಟಿ ಕಟ್ಟಿಕೊಂಡವರು ಈ ರೀತಿ ಖಾತೆಗಾಗಿ ಕ್ಯಾತೆ ತೆಗೆಯುತ್ತಿರುವುದು ಸಣ್ಣತನದ ವರ್ತನೆ” ಎಂದು ಟೀಕಿಸಿದರು.

🛠️ “ನಟ್ಟು-ಬೋಲ್ಟ್ ಟೈಟ್ ಮಾಡಿ ಕೆಲಸ ಮಾಡಿಸಿ”

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೇರ ಎಚ್ಚರಿಕೆ ನೀಡಿದ ಬಿಜೆಪಿ ವಕ್ತಾರರು, “ನಿಮ್ಮ ಆಂತರಿಕ ಕಚ್ಚಾಟಕ್ಕೆ ಬೆಂಗಳೂರಿನ ನಾಗರಿಕರು ಬಲಿಪಶುಗಳಾಗಬಾರದು. ಮುಖ್ಯಮಂತ್ರಿಗಳು ತಕ್ಷಣವೇ ಕೃಷ್ಣಭೈರೇಗೌಡರಿಗೆ ಅಧಿಕಾರ ಸ್ವೀಕರಿಸಲು ಆದೇಶಿಸಬೇಕು, ಇಲ್ಲವೇ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಅವರ ‘ನಟ್ಟು ಬೋಲ್ಟ್ ಟೈಟ್ ಮಾಡಿ’ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.

​ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಮೋಹನ್ ವಿಶ್ವ ಹಾಗೂ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ದ.ರಾ.ಬೇಂದ್ರೆಯವರ ಆದರ್ಶಗಳನ್ನು ಸಾಕಾರಗೊಳಿಸುತ್ತಿರುವ ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘ; ವಿಶ್ವಾಸ, ಸೇವೆ ಮತ್ತು ಸಹಕಾರದ ಶಕ್ತಿಯೇ ಸಂಘದ ಯಶಸ್ಸಿನ ಹಿಂದಿನ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಶಿವಮೊಗ್ಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ: ರಕ್ತದಾನದಿಂದ ಜೀವ ಉಳಿಸುವ ಶ್ರೇಷ್ಠ ಕಾರ್ಯದಲ್ಲಿ ಪಾಲ್ಗೊಳ್ಳಿ: ಜಿ. ವಿಜಯ್ ಕುಮಾರ್

ದಲಿತ ಮುಖ್ಯಮಂತ್ರಿ ಕನಸು: ಆತ್ಮಾಭಿಮಾನದ ಹಕ್ಕೊತ್ತಾಯವೇ, ಆತ್ಮವಂಚನೆಯ ರಾಜಕಾರಣವೇ?

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದಿಂದ ವಿಶ್ವ ರಕ್ತದಾನಿಗಳ ದಿನಾಚರಣೆ: ​ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯ: ಬಿ. ಗೋಪಿನಾಥ್ ಕರೆ

2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣಕ್ಕೆ ದೇಶ ಸಜ್ಜು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಸಾಲಿಗ್ರಾಮ ಶ್ರೀ ಆಂಜನೇಯರ ಅಪರೂಪದ ತ್ರಿಮೂರ್ತಿಗಳ ಮಹಿಮೆ: ಬ್ರಾಂತೇಶ, ಕಾಂತೇಶ ಮತ್ತು ಶಾಂತೇಶ ದರ್ಶನದಿಂದ ಕಾಶಿ ವಿಶ್ವನಾಥನ ದರ್ಶನದ ಪುಣ್ಯ ಪಡೆದಂತೆ

Leave a Comment