ಭದ್ರಾವತಿ, ಸೆಪ್ಟೆಂಬರ್ 10: ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಈದ್ ಮಿಲಾದ್ ಮೆರವಣಿಗೆಯಲ್ಲಿ ನೀಡಿದ “ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು” ಎಂಬ ಹೇಳಿಕೆ ಇದೀಗ ಬಿರುಸು ತಾಳಿದೆ. ತಮ್ಮ ನಾಲ್ಕು ಬಾರಿಯ ಗೆಲುವಿಗೆ ಮುಸ್ಲಿಂ ಬಾಂಧವರ ಬೆಂಬಲವೇ ಕಾರಣ ಎಂದು ಅವರು ಘೋಷಿಸಿ, “ನಿಮ್ಮ ಆಶೀರ್ವಾದ ಇಲ್ಲದೆ ನಾನು ಈ ಸ್ಥಾನದಲ್ಲಿ ಇರಲಾರೆ. ಅದಕ್ಕಾಗಿಯೇ ಮುಂದಿನ ಜನ್ಮದಲ್ಲಿ ನಿಮ್ಮ ಸಮಾಜದಲ್ಲೇ ಹುಟ್ಟಬೇಕು ಅನ್ನಿಸುತ್ತಿದೆ” ಎಂದು ಹೇಳಿದ್ದರು.
ಆದರೆ ಈ ಹೇಳಿಕೆ, ಅವರು ಜನಿಸಿದ ವೀರಶೈವ–ಲಿಂಗಾಯತ ಸಮುದಾಯದಲ್ಲಿ ಭಾರೀ ಆಕ್ರೋಶ ಹುಟ್ಟುಹಾಕಿದೆ.
ತಮ್ಮ ಜನ್ಮಸಮುದಾಯವನ್ನು ಮರೆತು ಮತ್ತೊಂದು ಧರ್ಮದಲ್ಲಿ ಹುಟ್ಟಬೇಕು ಎನ್ನುವುದು, ವೀರಶೈವ–ಲಿಂಗಾಯತ ಸಮುದಾಯದ ಗೌರವಕ್ಕೆ ಧಕ್ಕೆ ತರುವ ಹೇಳಿಕೆ.
ರಾಜಕೀಯ ಲಾಭಕ್ಕಾಗಿ ಮಾತ್ರ ಇಂತಹ ಮಾತುಗಳು ಬರುತ್ತಿವೆ. ಮತಪರ ಲೆಕ್ಕಾಚಾರಕ್ಕಾಗಿ ತಮ್ಮ ಮೂಲ ಸಮುದಾಯದ ಭಾವನೆಗಳನ್ನು ಅವಮಾನಿಸುತ್ತಿದ್ದಾರೆ.

ಲಿಂಗಾಯತರು ಶತಮಾನಗಳಿಂದ ಸಮಾಜದ ಹಿತಕ್ಕಾಗಿ ಹೋರಾಟ ನಡೆಸಿ ಬಂದಿದ್ದಾರೆ. ಇಂತಹ ಹೇಳಿಕೆಗಳು ಆ ಪರಂಪರೆಗೂ ಅವಮಾನ.
ಸಮುದಾಯದ ಮೇಲೆ ಅವಲಂಬನೆ ಹೊಂದಿದ್ದೇ ರಾಜಕೀಯ ಬದುಕಿಗೆ ಬುನಾದಿಯಾಗಿರುವ ಶಾಸಕರು, ಈಗ ಮತದ ಲೆಕ್ಕಾಚಾರದಿಂದ ನಮ್ಮ ಸಮಾಜದ ಗುರುತಿಗೆ ಕಲ್ಲು ಹೊಡೆದಂತಾಗಿದೆ.
ಇದು ವೀರಶೈವ–ಲಿಂಗಾಯತ ಸಮುದಾಯದ ಗುರುತಿಗೆ ಧಕ್ಕೆ ತರುವ ಹೇಳಿಕೆ. ತಮ್ಮ ಜನ್ಮಸಮಾಜವನ್ನು ನಿರ್ಲಕ್ಷಿಸಿ ಮತ್ತೊಂದು ಧರ್ಮದ ಮೆಚ್ಚುಗೆ ವ್ಯಕ್ತಪಡಿಸುವುದು ಸಮುದಾಯದ ಭಾವನೆಗಳಿಗೆ ಅವಮಾನ.
ವೀರಶೈವ–ಲಿಂಗಾಯತ ಸಮಾಜವು ಬಸವಣ್ಣನ ತತ್ವ, ಶರಣರ ಸಂದೇಶ ಮತ್ತು ಗುರುಪೀಠಗಳ ಪರಂಪರೆಯ ಮೇಲೆ ಬದುಕುತ್ತಿರುವುದು. ಇಂತಹ ಸಮಾಜದಿಂದ ಬಂದ ಶಾಸಕರು ಮತ್ತೊಂದು ಧರ್ಮದಲ್ಲಿ ಹುಟ್ಟಬೇಕು ಎನ್ನುವುದು ಅವಮಾನಕಾರಿ ಮಾತು.
ಭದ್ರಾವತಿಯಲ್ಲಿ ಕಂಡುಬಂದ ಈ ಕೀಳು ಮಟ್ಟದ ರಾಜಕೀಯ ಹೇಳಿಕೆ, ವೀರಶೈವ–ಲಿಂಗಾಯತ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಮುದಾಯ ಮುಖಂಡರು, ಮಠಾಧೀಶರು ಮತ್ತು ಸಮಾಜದ ಸಂಘಟನೆಗಳು ಶಾಸಕರಿಂದ ಸಾರ್ವಜನಿಕ ಕ್ಷಮೆಯಾಚನೆಗಾಗಿ ಒತ್ತಾಯಿಸುತ್ತಿದ್ದು, ಈ ವಿವಾದ ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಚರ್ಚೆಗಳಿಗೆ ಭಾರೀ ಸಂಚಲನ ಉಂಟುಮಾಡಲಿದೆ.
ನಮ್ಮ ಸಮಾಜವು ಸಾವಿರಾರು ವರ್ಷಗಳಿಂದ ಗುರುಪೀಠ, ಮಠ ಮತ್ತು ಪರಂಪರೆಯ ಮೇಲೆ ನಿಂತಿದೆ. ಇಂತಹ ಹೇಳಿಕೆಗಳು ಕೇವಲ ಸಮಾಜದ ಗೌರವಕ್ಕೆ ಧಕ್ಕೆ ತರುತ್ತದೆ. ಶಾಸಕರು ತಕ್ಷಣ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಶಾಸಕರು ತಮ್ಮ ಜನ್ಮಸಮುದಾಯವನ್ನು ಮರೆತು ಮತ್ತೊಂದು ಧರ್ಮದ ಮೆಚ್ಚುಗೆಯನ್ನು ಪಡೆಯಲು ಮಾತುಗಳನ್ನು ಬಳಸುವ ನಡವಳಿಕೆ ತೀವ್ರ ಖಂಡನೀಯ. ತಕ್ಷಣ ಹಿಂತೆಗೆದುಕೊಳ್ಳಬೇಕು” ಎಂದು ರಾಜ್ಯಾದ್ಯಂತ, ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕಿನ ಸಮಾಜದ ಮುಖಂಡರು ಹಾಗೂ ಲಿಂಗಾಯತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಸಂಗಮೇಶ್ ಅವರ ಹೇಳಿಕೆ ಈಗ ವೀರಶೈವ–ಲಿಂಗಾಯತ ಸಮುದಾಯದ ಕಠಿಣ ಖಂಡನೆ, ಸಂಘಟನೆಗಳ ಆಕ್ರೋಶ, ವಿರೋಧ ಪಕ್ಷಗಳ ರಾಜಕೀಯ ದಾಳಿ ಮತ್ತು ಮುಸ್ಲಿಂ ಸಮುದಾಯದ ಮೆಚ್ಚುಗೆಗಳನ್ನು ಹುಟ್ಟುಹಾಕಿದೆ.
ರಾಜಕೀಯವಾಗಿ ಈ ಹೇಳಿಕೆ ಅವರಿಗೆ ಲಾಭವಾಗುತ್ತದೆಯೋ ಅಥವಾ ನಷ್ಟವಾಗುತ್ತದೆಯೋ ಎಂಬುದು ಮುಂದೆ ಗೊತ್ತಾಗಬೇಕು. ಆದರೆ ಒಂದು ವಿಷಯ ಸ್ಪಷ್ಟ – ತಮ್ಮ ಜನ್ಮಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳು, ಜನಪ್ರತಿನಿಧಿಗಳ ವಿಶ್ವಾಸಾರ್ಹತೆಗೆ ಗಂಭೀರ ಧಕ್ಕೆಯೇ ಆಗುತ್ತವೆ.