ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​ಎಚ್ಚರ! ಔಷಧವೇ ಆಹಾರವಾಗುವ ಕಾಲ ದೂರವಿಲ್ಲ; ವಿಷಮುಕ್ತ ಆಹಾರ ಇಂದಿನ ಅಗತ್ಯ: ಹೂವಿನಕೆರೆಯಲ್ಲಿ ಸಾವಯವ ಕೃಷಿ ಮಹತ್ವ ಸಾರಿದ ಸೋದೆ ಶ್ರೀಗಳು

On: July 13, 2026 1:13 PM
Follow Us:

ಹೂವಿನಕೆರೆ: “ಪಾರಂಪರಿಕ ಭತ್ತದ ತಳಿಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅವುಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕೃಷಿ ಪ್ರಯೋಗ ಪರಿವಾರ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಪ್ರಸ್ತುತ ದಿನಗಳಲ್ಲಿ ಆಹಾರವೇ ಔಷಧವಾಗಬೇಕಾದ ಸನ್ನಿವೇಶ ಎದುರಾಗಿದೆ. ಇದಕ್ಕೆ ಏಕೈಕ ಪರಿಹಾರವೆಂದರೆ ರಾಸಾಯನಿಕ ಮುಕ್ತ, ವಿಷಮುಕ್ತ ಅನ್ನವನ್ನು ಬೆಳೆಯುವುದೇ ಆಗಿದೆ,” ಎಂದು ಸೋದೆ ವಾದಿರಾಜ ಮಠದ ಜಗದ್ಗುರು ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಕರೆ ನೀಡಿದರು.

ಕೃಷಿ ಕಾಳಜಿಯಿಂದ ಮಹಾನ್ ಸಂತ ಶ್ರೀ ವಾದಿರಾಜ ಗುರುಸಾರ್ವಭೌಮರ ಅವತಾರ ಭೂಮಿಯಾದ ಹೂವಿನಕೆರೆಯ ಗೌರಿಗದ್ದೆಯಲ್ಲಿ, ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನಿಗೆ ಶುದ್ಧ ನೈವೇದ್ಯ ಸಮರ್ಪಿಸುವ ನಿಮಿತ್ತ ಆಯೋಜಿಸಲಾಗಿದ್ದ ‘ಪಾರಂಪರಿಕ ಭತ್ತದ ತಳಿ ಸಂರಕ್ಷಣಾ ಅಭಿಯಾನ’ದ ಅಂಗವಾಗಿ ಭತ್ತದ ಸಸಿ ನೆಟ್ಟು ಅವರು ಆಶೀರ್ವಚನ ನೀಡಿದರು.

ನಿತ್ಯವೂ ಒಂದೊಂದು ತಳಿಯ ನೈವೇದ್ಯ: ಒಂದು ಅಪೂರ್ವ ಯೋಜನೆ

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನಿಗೆ ನಿತ್ಯವೂ ಒಂದೊಂದು ವಿಭಿನ್ನ ಪಾರಂಪರಿಕ ತಳಿಯ ಶುದ್ಧ ಅನ್ನದ ನೈವೇದ್ಯವನ್ನು ಸಮರ್ಪಿಸುವ ಈ ಮಹತ್ತರ ಯೋಜನೆಯ ರೂವಾರಿ, ಸಂಸ್ಕೃತಿ ಚಿಂತಕ ಹಾಗೂ ಹಾದಿಗಲ್ಲು ಅಭಯಲಕ್ಷ್ಮೀನೃಸಿಂಹ ದೇಗುಲದ ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

“ರೈತರ ಕೈ ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಂತ ಕೃಷಿ ಭೂಮಿ ಇಲ್ಲದ ಸಾರ್ವಜನಿಕರೂ ಸಹ ಈ ಅಭಿಯಾನಕ್ಕೆ ಆರ್ಥಿಕ ನೆರವು ನೀಡುವ ಪ್ರಾಯೋಜಕತ್ವದ ಮೂಲಕ ‘ಪರೋಕ್ಷ ರೈತ’ರಾಗಿ ಪಾಲ್ಗೊಳ್ಳಬಹುದು. ಈ ಮೂಲಕ ದೇಶದ ಕೃಷಿ ಪರಂಪರೆಯನ್ನು ಉಳಿಸಲು ಕೈಜೋಡಿಸಬಹುದು,” ಎಂದು ಅವರು ವಿನಂತಿಸಿದರು.

🌱 ಕೃಷಿ ಋಷಿಯ ಹಾದಿಯಲ್ಲಿ ಬೀಜ ಸಂರಕ್ಷಣೆ

ಕೃಷಿ ಪ್ರಯೋಗ ಪರಿವಾರದ ಟ್ರಸ್ಟಿ ಚಕ್ಕೋಡಬೈಲು ಶ್ರೀವತ್ಸ ಅವರು ಮಾತನಾಡಿ, ಕೃಷಿ ಋಷಿ ದಿ. ಪುರುಷೋತ್ತಮರಾಯರು ಸಾವಯವ ಕೃಷಿಯನ್ನು ನಾಡಿನಾದ್ಯಂತ ಪಸರಿಸಿದ ಬಗೆಯನ್ನು ಸ್ಮರಿಸಿದರು. ಅಳಿವಿನ ಅಂಚಿನಲ್ಲಿರುವ ಪಾರಂಪರಿಕ ಬೀಜ ಹಾಗೂ ಭತ್ತದ ತಳಿಗಳ ಸಂರಕ್ಷಣೆಗಾಗಿ ಕೃಷಿ ಪ್ರಯೋಗ ಪರಿವಾರ ಹಮ್ಮಿಕೊಂಡಿರುವ ವೈವಿಧ್ಯಮಯ ಚಟುವಟಿಕೆಗಳು ಮತ್ತು ಮುಂದಿನ ಯೋಜನೆಗಳ ಕುರಿತು ಅವರು ಸಭೆಗೆ ಸವಿಸ್ತಾರವಾದ ಮಾಹಿತಿ ನೀಡಿದರು.

​ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿ ಮಾಡುವ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರೀ ಉದಯ ಶೇಟ್ ಹಾಗೂ ಶ್ರೀ ಸೂರ್ಯನಾರಾಯಣ ಅಡಿಗ ಅವರು ತಲಾ ಎರಡು ಎಕರೆ ಗದ್ದೆ ಕೃಷಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಪ್ರಾಯೋಜಕರಾಗಿ ಮುಂದೆ ಬಂದರು. ಸೋದೆ ಶ್ರೀಗಳಿಂದ ಮಂತ್ರಾಕ್ಷತೆ ಹಾಗೂ ಆಶೀರ್ವಾದ ಪಡೆದ ಇವರ ನಡೆ, ನೆರೆದಿದ್ದ ನೂರಾರು ಸಾವಯವ ಕೃಷಿಕರಲ್ಲಿ ಹೊಸ ಹುಮ್ಮಸ್ಸು ಮತ್ತು ಭರವಸೆಯನ್ನು ಮೂಡಿಸಿತು.

​ಕಾರ್ಯಕ್ರಮದಲ್ಲಿ ಕೃಷಿ ಪ್ರಯೋಗ ಪರಿವಾರದ ಪೂರ್ಣಾವಧಿ ಕಾರ್ಯಕರ್ತ ಹಾಗೂ ಕೃಷಿ ಪದವೀಧರ ಅರುಣ್, ವ್ಯವಸ್ಥಾಪಕ ನಿರ್ದೇಶಕ ಸರು ದಿನೇಶ್, ನಿರ್ದೇಶಕ ಕಾರ್ಕಳ ಶ್ರೀನಿವಾಸ ಭಟ್, ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ್, ಹೂವಿನಕೆರೆ ಮಠದ ಆಡಳಿತ ಸಮಿತಿಯ ಚಂದ್ರಮೋಹನ ಧನ್ಯ, ಕೋಟೇಶ್ವರ ರಮೇಶ್ ಹತ್ವಾ ಸೇರಿದಂತೆ ಪ್ರಾಂತ್ಯದ ನೂರಾರು ಪ್ರಗತಿಪರ ರೈತರು, ಮಠದ ಸದ್ಭಕ್ತರು ಸಕ್ರಿಯವಾಗಿ ಪಾಲ್ಗೊಂಡು ಕೃಷಿ ಕಾಯಕದಲ್ಲಿ ಭಾಗಿಯಾದರು.

K.M.Sathish Gowda

Join WhatsApp

Join Now

Facebook

Join Now

Read more

ರೋಟರಿ ಶಿವಮೊಗ್ಗ ಪೂರ್ವದ ನೂತನ ಪದಾಧಿಕಾರಿಗಳ ಪದಗ್ರಹಣ; ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ: ಡಿ.ಕೆ. ಶೇಷಗಿರಿ

ಜಾತಿ ಜನಗಣತಿ ಹೆಸರಿನಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ; ಬದ್ಧತೆಯ ಕೊರತೆಯಿಂದ ಒಬಿಸಿ ಸಮುದಾಯಗಳ ವಿಶ್ವಾಸಕ್ಕೆ ದ್ರೋಹ: ರಘು ಕೌಟಿಲ್ಯ

ಅರಮನೆ ಮೈದಾನದಲ್ಲಿ ಮೊಳಗಿತು 70 ಲಕ್ಷ ಕುಟುಂಬಗಳ ಸ್ವಾಭಿಮಾನದ ಧ್ವನಿ!; ಒಪಿಎಸ್ ಜಾರಿ, ಎನ್‌ಪಿಎಸ್ ರದ್ದು, ಕೇಂದ್ರ ಮಾದರಿಯ ವೇತನಕ್ಕೆ ಒತ್ತಾಯ: ನೌಕರರ ಭವಿಷ್ಯದ ಪ್ರಶ್ನೆ ಮುಂದಿಟ್ಟ ಸಿ.ಎಸ್. ಷಡಾಕ್ಷರಿ

​ಲಿಂ. ಎಸ್.ಆರ್. ಕಾಶಪ್ಪನವರ 24ನೇ ಪುಣ್ಯಸ್ಮರಣೆ; “ಅಧಿಕಾರಾವಧಿಯಲ್ಲಿ ಕಾಶಪ್ಪನವರು ಮಾಡಿದ ಜನಪರ ಕೆಲಸಗಳು ಎಂದಿಗೂ ಅಮರ”: ಶ್ರೀ ರಂಭಾಪುರಿ ಜಗದ್ಗುರುಗಳು

ಸರ್ಕಾರಿ ನೌಕರರ ಶಕ್ತಿ, ಸಂಘಟನೆಯ ವೈಭವ; ಸಿ.ಎಸ್. ಷಡಾಕ್ಷರಿ ನಾಯಕತ್ವದಲ್ಲಿ ವಿಜೃಂಭಿಸಿದ ‘ನಮ್ಮಭಿಮಾನದ ಅಭಿನಂದನೆ’

ರಾಜ್ಯದ ಅಭಿವೃದ್ಧಿಗೆ ಸರ್ಕಾರಿ ನೌಕರರೇ ಶಕ್ತಿ; ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು: ಸಿ.ಎಸ್. ಷಡಾಕ್ಷರಿ

Leave a Comment