ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜೀವನದ ಸಾರ್ಥಕತೆಗೆ ಗುರಿ ಮತ್ತು ಗುರು ಅತ್ಯಗತ್ಯ; ಧರ್ಮದ ಬೆಳಕಿನಲ್ಲಿ ಸಾರ್ಥಕ ಬದುಕು ಕಟ್ಟಿಕೊಳ್ಳಿ: ಶ್ರೀ ರಂಭಾಪುರಿ ಜಗದ್ಗುರು

On: July 22, 2026 9:30 AM
Follow Us:

ಗದಗ: “ಮಾನವ ಜೀವನ ಅತ್ಯಂತ ಅಮೂಲ್ಯವಾದದ್ದು. ಅನೇಕ ಜನ್ಮಗಳ ಪುಣ್ಯದ ಫಲವಾಗಿ ದೊರೆತ ಈ ಬದುಕು ಸಾರ್ಥಕವಾಗಬೇಕಾದರೆ ಗುರಿಯೂ ಇರಬೇಕು, ಗುರುಗಳ ಮಾರ್ಗದರ್ಶನವೂ ಇರಬೇಕು. ಗುರಿ ಮತ್ತು ಗುರು ಇಲ್ಲದ ಜೀವನ ನಿರರ್ಥಕವಾಗುತ್ತದೆ” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಗದಗ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಶ್ರೀ ಕಾಶಿ ಜಗದ್ಗುರುಗಳ ಆಶಾಢ ಮಾಸದ ಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮವೇ ಮಾನವ ಜೀವನದ ದಾರಿ ದೀಪ: ಶ್ರೀ ರಂಭಾಪುರಿ ಜಗದ್ಗುರುಗಳು

ಧರ್ಮದ ಮಹತ್ವ ಹಾಗೂ ಆತ್ಮಬೆಳಕು
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಂಭಾಪುರಿ ಜಗದ್ಗುರುಗಳು, “ಹೊತ್ತ ಭೂಮಿ ಮತ್ತು ಹೆತ್ತ ತಾಯಿ ನಮಗೆಷ್ಟು ಮುಖ್ಯವೋ, ಪ್ರತಿಯೊಬ್ಬ ಮನುಷ್ಯನಿಗೂ ಧರ್ಮವೂ ಅಷ್ಟೇ ಮುಖ್ಯ. ಅಸತ್ಯದಿಂದ ಸತ್ಯದತ್ತ, ಕತ್ತಲೆಯಿಂದ ಬೆಳಕಿನತ್ತ ಹಾಗೂ ಸಾವಿನಿಂದ ಸಾವಿಲ್ಲದ ಮುಕ್ತಿಯೆಡೆಗೆ ಕರೆದೊಯ್ಯುವ ಮಾರ್ಗವೇ ನಿಜವಾದ ಧರ್ಮ.”

“ಹಗಲಿನಲ್ಲಿ ಸೂರ್ಯ ಮತ್ತು ರಾತ್ರಿಯಲ್ಲಿ ಚಂದ್ರ ಬೆಳಕನ್ನು ನೀಡಬಲ್ಲರು. ಆದರೆ ಸರ್ವಕಾಲಕ್ಕೂ, ಸರ್ವ ಸಮುದಾಯಕ್ಕೂ ಆತ್ಮಬೆಳಕನ್ನು ನೀಡುವ ಶಕ್ತಿ ಇರುವುದು ಧರ್ಮಕ್ಕೊಂದೇ ಎಂಬುದನ್ನು ಯಾರೂ ಮರೆಯಬಾರದು” ಎಂದು ಬೋಧಿಸಿದರು.
ವೀರಶೈವ ಧರ್ಮದ ಭವ್ಯ ಪರಂಪರೆ
ಸಕಲ ಜೀವರಾಶಿಗಳ ಒಳಿತನ್ನೇ ಬಯಸುವ ಧರ್ಮವೇ ವೀರಶೈವ ಧರ್ಮ. 28 ಶಿವಾಗಮಗಳಲ್ಲಿ ವೀರಶೈವ ಧರ್ಮದ ಭವ್ಯ ಇತಿಹಾಸ, ಪರಂಪರೆ ಮತ್ತು ಆದರ್ಶ ಮೌಲ್ಯಗಳನ್ನು ನಾವು ಕಾಣಬಹುದು ಎಂದು ವಿವರಿಸಿದರು.
ಆಷಾಢ ಮಾಸ ಶುಭ ಮಾಸವಾಗಿ ಪರಿವರ್ತನೆ
ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸೆಯಿಂದ ಹಿಡಿದು ಧ್ಯಾನ್ ಪರ್ಯಂತದ ‘ದಶ ಧರ್ಮ ಸೂತ್ರಗಳು’ ಪ್ರತಿಯೊಬ್ಬ ಮಾನವನಿಗೆ ದಾರಿದೀಪವಾಗಿವೆ. ಸಮಾಜದಲ್ಲಿ ಬಹುತೇಕ ಜನರು ಆಷಾಢ ಮಾಸವನ್ನು ‘ಅಶುಭ ಮಾಸ’ ಎಂದು ಭಾವಿಸುತ್ತಾರೆ. ಆದರೆ, ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸುವ ಮೂಲಕ ಈ ಮಾಸವನ್ನು ಪರಮ ಪವಿತ್ರವಾದ ‘ಶುಭ ಮಾಸ’ವನ್ನಾಗಿ ಪರಿವರ್ತಿಸಿದ ಕೀರ್ತಿ ಲಿಂಗೈಕ್ಯ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ.
ಗದಗ ನಗರದ ಧಾರ್ಮಿಕ ಜಾಗೃತಿ ಕಾರ್ಯಕ್ರಮ
ಗದಗ ನಗರದಲ್ಲಿ ಶ್ರೀ ಕಾಶಿ ಜಗದ್ಗುರುಗಳು ಆಷಾಢ ಮಾಸದ 5 ದಿನಗಳ ಕಾಲ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನದ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಹೇಳಿ, ಇದಕ್ಕೆ ಶ್ರಮಿಸಿದ ಸಂಘಟಕರಿಗೆ ಶುಭ ಹಾರೈಸಿದರು.

ಆಧ್ಯಾತ್ಮಿಕ ಸಂಪತ್ತೇ ನಿಜವಾದ ಶಾಂತಿ: ಶ್ರೀ ಕಾಶಿ ಜಗದ್ಗುರುಗಳು

ಆಧ್ಯಾತ್ಮದ ಜ್ಞಾನವೇ ನಿಜವಾದ ಶಾಂತಿ
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಮತ್ ಕಾಶಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು, “ಲೌಕಿಕ ಅಥವಾ ಭೌತಿಕ ಸಂಪತ್ತುಗಳಿಗಿಂತ ಆಧ್ಯಾತ್ಮಿಕ ಸಂಪತ್ತು ಅತ್ಯಂತ ದೊಡ್ಡದು. ಆಧ್ಯಾತ್ಮದ ಜ್ಞಾನ ಸಂಪತ್ತಿನಿಂದ ಮಾತ್ರ ಮನುಷ್ಯನಿಗೆ ನಿಜವಾದ ಶಾಂತಿ ಮತ್ತು ನೆಮ್ಮದಿ ಸಿಗಲು ಸಾಧ್ಯ,” ಎಂದರು.
ಸಾಧನಾ ಮಾರ್ಗ ಹಾಗೂ ಸಿದ್ಧಾಂತ ಶಿಖಾಮಣಿ
ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರನ್ನು ನಿಮಿತ್ತವಾಗಿಟ್ಟುಕೊಂಡು ವೀರಶೈವ ಧರ್ಮದ ಪರಮ ರಹಸ್ಯವನ್ನು ಬೋಧಿಸಿ ಉದ್ಧರಿಸಿದ್ದಾರೆ. ಜೀವ-ಶಿವನಾಗುವ, ಅಂಗ-ಲಿಂಗವಾಗುವ, ನರ-ಹರನಾಗುವ ಹಾಗೂ ಭವಿ-ಭಕ್ತನಾಗುವ ಸಾಧನಾ ಮಾರ್ಗವನ್ನು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಮೂಲಕ ತಿಳಿಯಬಹುದಾಗಿದೆ.
ಸದ್ಭಕ್ತರ ಸೌಭಾಗ್ಯ
ಗದಗಿನಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿರುವುದು ಸಕಲ ಸದ್ಭಕ್ತರ ಸೌಭಾಗ್ಯ ಎಂದು ಶ್ರೀ ಕಾಶಿ ಜಗದ್ಗುರುಗಳು ಹರ್ಷ ವ್ಯಕ್ತಪಡಿಸಿದರು.

ಪೂಜ್ಯರು ಹಾಗೂ ಗಣ್ಯರ ಉಪಸ್ಥಿತಿ

ಪ್ರಾಸ್ತಾವಿಕ ನುಡಿ
ನರೇಗಲ್ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, “ಜನನ ಎಷ್ಟೋ ಸಹಜವೋ ಮರಣವೂ ಅಷ್ಟೇ ನಿಶ್ಚಿತ. ಈ ಜನನ-ಮರಣಗಳ ಮಧ್ಯದ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವುದೇ ಮನುಷ್ಯನ ಮುಖ್ಯ ಗುರಿಯಾಗಬೇಕು,” ಎಂದರು.
ಅಧ್ಯಕ್ಷೀಯ ಆಶೀರ್ವಚನ
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮದ ಸಿದ್ಧಾಂತವು ಸಕಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ನುಡಿ ಮತ್ತು ನಡೆ ಒಂದಾಗಿ ಬಾಳಬೇಕೆಂಬುದನ್ನು ಸಿದ್ಧಾಂತ ಶಿಖಾಮಣಿ ಬೋಧಿಸುತ್ತದೆ ಎಂದರು.
ಸಾನ್ನಿಧ್ಯ ಹಾಗೂ ‘ಗುರು ರಕ್ಷೆ’ ಆಶೀರ್ವಾದ
ಕಾರ್ಯಕ್ರಮದಲ್ಲಿ ಅಡವಿನೂರು ಹಿರೇಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ರಂಗಗಳ ಗಣ್ಯರಿಗೆ ಹಾಗೂ ದಾನಿಗಳಿಗೆ ಉಭಯ ಜಗದ್ಗುರುಗಳು ‘ಗುರು ರಕ್ಷೆ’ ನೀಡಿ ಆಶೀರ್ವದಿಸಿದರು.
ಸಂಗೀತ ಸೇವೆ, ನಿರ್ವಹಣೆ ಹಾಗೂ ಅನ್ನ ದಾಸೋಹ
ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಮಧುರ ಸಂಗೀತ ಕಾರ್ಯಕ್ರಮ ನಡೆಯಿತು. ಮಂಜುನಾಥ ಬೆಲೇರಿ ಸ್ವಾಗತಿಸಿದರು, ಚಂದೂ ಬಾಳಿಹಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದ ನಂತರ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಕೃಪಾಪೂರ್ಣ ‘ಅನ್ನ ದಾಸೋಹ’ ನೆರವೇರಿತು.

K.M.Sathish Gowda

Join WhatsApp

Join Now

Facebook

Join Now

Read more

ಹಣದ ಜೊತೆಗೆ ಗುಣವಿದ್ದರೆ ಬದುಕು ಸಾರ್ಥಕ; ಗುಣವಿದ್ದರೆ ಭಗವಂತ ಸದಾ ಜೊತೆಯಲ್ಲಿರುತ್ತಾನೆ: ಶ್ರೀ ರಂಭಾಪುರಿ ಜಗದ್ಗುರುಗಳು

ವೀರಶೈವ-ಲಿಂಗಾಯತ ಸಮಾಜ ಒಳಪಂಗಡಗಳ ಭೇದ ಮರೆತು ಒಂದಾಗಲಿ; ಸಮಾಜದಲ್ಲಿ ಸಂಘಟನೆಗಳು ಬೆಳೆಯಬೇಕೇ ಹೊರತು ಸಂಘರ್ಷಗಳು ನಡೆಯಬಾರದು: ಶ್ರೀ ರಂಭಾಪುರಿ ಜಗದ್ಗುರುಗಳು

ಅಂತರಂಗ ಶುದ್ಧಿಯಾದಾಗಲೇ ಸಮಾಜದಲ್ಲಿ ಶಾಂತಿ-ಸಮಾನತೆ ನೆಲೆಸುತ್ತದೆ: ಶಿವಗಂಗಾ ಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ

ವೀರಶೈವ-ಲಿಂಗಾಯತ ಸಮಾಜ ಒಡೆಯುವ ದುಷ್ಟಶಕ್ತಿಗಳಿಗೆ ಎಚ್ಚರಿಕೆ: ಸಮಾಜ ಒಗ್ಗಟ್ಟಿನಿಂದ ಸಾಗಿದರೆ ಮಾತ್ರ ಇನ್ನಷ್ಟು ಬಲಿಷ್ಠ – ಬಿ.ವೈ. ವಿಜಯೇಂದ್ರ

ವೀರಶೈವ ಧರ್ಮ ಸಂಸ್ಕೃತಿಯ ರಕ್ಷಣೆ ಹಾಗೂ ಸಮಾಜದ ಒಗ್ಗಟ್ಟಿನಿಂದ ಮಾತ್ರ ಉಜ್ವಲ ಭವಿಷ್ಯ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಸಂಪತ್ತಿಗಿಂತ ಸಂಸ್ಕಾರವೇ ಮನುಷ್ಯನ ನಿಜವಾದ ಸಂಪತ್ತು; ಧರ್ಮಾಚರಣೆ ಯಿಂದಷ್ಟೇ ವ್ಯಕ್ತಿತ್ವಕ್ಕೆ ಗೌರವ ಮತ್ತು ಮೌಲ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment