ಇಂದು ಭೂಮಿಯ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರಲ್ಲೂ ಭೂ ರಹಿತ ಬಡವರು ತಮ್ಮ ಜೀವನೋಪಯಕ್ಕಾಗಿ ಭೂಮಿಯನ್ನು ಖರೀದಿಸುವುದು ಕನಸಿನ ಮಾತೇ ಸರಿ. ಇದನ್ನು ಮನಗಂಡು ರಾಜ್ಯ ಸರ್ಕಾರ ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಿದೆ. ಈ ಹಿಂದೆ ಜಾರಿಯಲ್ಲಿದ್ದ ಊಳುವವನೇ ಭೂಮಿಯ ಒಡೆಯ ಯೋಜನೆಯ ಆಶಯವನ್ನು ಈಡೇರಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬಗಳು ಭೂಮಿ ಖರೀದಿಸಲು ಸರ್ಕಾರ ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಭೂ ಮಾಲೀಕರನ್ನಾಗಿ ಮಾಡಲಿದೆ.
ಏನಿದು ಭೂ ಒಡೆತನ ಯೋಜನೆ?
ಭೂ -ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರದ ಭೂ ಮಾಲೀಕರಿಂದ ಜಮೀನನ್ನು ಖರೀದಿಸಿ, ಪರಿಶಿಷ್ಟ ಜಾತಿಯ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯಡಿ 27 ಜಿಲ್ಲೆಗಳ ಫಲಾನುಭವಿಗಳಿಗೆ 20 ಲಕ್ಷ ರೂ. ಮತ್ತು 4 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ) 25 ರೂ. ಲಕ್ಷಗಳಿಗೆ (ಸಹಾಯಧನ ಶೇ 50 ಮತ್ತು ಸಾಲ ಶೇ 50 ರಷ್ಟು) ಖುಷ್ಕಿ/ತರಿ/ಬಾಗಾಯ್ತು ಜಮೀನನ್ನು ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ. ಮೀ. ವ್ಯಾಪ್ತಿಯೊಳಗೆ ಖರೀದಿಸಿ, ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಒದಗಿಸಲಾಗುವುದು ಮತ್ತು ಸಾಲದ ಮೊತ್ತವನ್ನು 10 ವಾರ್ಷಿಕ ಸಮ ಕಂತುಗಳಲ್ಲಿ ವಾರ್ಷಿಕ ಶೇ 6 ರ ಬಡ್ಡಿ ದರದಲ್ಲಿ ನಿಗಮಕ್ಕೆ ಮರುಪಾವತಿ ಮಾಡ ಬೇಕಾಗಿರುತ್ತದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಕರ್ನಾಟಕ ತಾಂಡಾ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ನಂತಹ ವಿವಿಧ ಅಭಿವೃದ್ಧಿ ನಿಗಮಗಳು ಅನುಷ್ಠಾನಗೊಳಿಸುತ್ತವೆ.
ಯೋಜನೆಯ ಪ್ರಮುಖ ಅಂಶಗಳು
ಉದ್ದೇಶಿತ ಫಲಾನುಭವಿಗಳು: ಭೂರಹಿತ ಕೃಷಿ ಕಾರ್ಮಿಕರು, ವಿಶೇಷವಾಗಿ ಮಹಿಳೆಯರು, SC/ST ಸಮುದಾಯದವರು ಈ ಯೋಜನೆಗೆ ಅರ್ಹರಾಗಿದ್ದಾರೆ.
ಭೂಸ್ವಾಧೀನ: ಈ ಯೋಜನೆಯು SC/ST ಅಲ್ಲದ ಭೂಮಾಲೀಕರಿಂದ ಭೂಮಿಯನ್ನು ಖರೀದಿಸಿ ಫಲಾನುಭವಿಯ ಹೆಸರಿನಲ್ಲಿ ನೋಂದಾಯಿಸುವುದನ್ನು ಒಳಗೊಂಡಿರುತ್ತದೆ.
ಹಣಕಾಸು ನೆರವು: ಈ ಯೋಜನೆಯು ಭೂಮಿಯನ್ನು ಖರೀದಿಸಲು ಸಬ್ಸಿಡಿಗಳು ಮತ್ತು ಸಾಲಗಳ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತದೆ.
ಘಟಕ ವೆಚ್ಚ: ಭೂ ಖರೀದಿಗೆ ಯೂನಿಟ್ ವೆಚ್ಚವು ಬದಲಾಗುತ್ತದೆ. ಬೆಂಗಳೂರು ನಗರ ಮತ್ತು ಗ್ರಾಮೀಣದಂತಹ ಕೆಲವು ಜಿಲ್ಲೆಗಳಿಗೆ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಲಾಗಿದ್ದು ಗರಿಷ್ಠ 25 ಲಕ್ಷ ರೂ.ವರೆಗಿನ ಸಾಲ ಸೌಲಭ್ಯ ಪಡೆಯಬಹುದು. ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ, ಯೂನಿಟ್ ವೆಚ್ಚವು 20.00 ಲಕ್ಷ ರೂ. ಗಳಾಗಿದ್ದು, 10.00 ಲಕ್ಷ ರೂ. ಗಳನ್ನು ಸಬ್ಸಿಡಿಯಾಗಿ ಮತ್ತು ರೂ. 10.00 ಲಕ್ಷಗಳನ್ನು ಸಾಲವಾಗಿ ನೀಡಲಾಗುತ್ತದೆ.
ಭೂಮಿಯ ಪ್ರಕಾರ ಮತ್ತು ವಿಸ್ತೀರ್ಣ: ಈ ಯೋಜನೆಯು ಖರೀದಿಸಬಹುದಾದ ಭೂಮಿಯ ವ್ಯಾಪ್ತಿಯನ್ನು ನಿರ್ದಿಷ್ಟಪಡಿಸುತ್ತದೆ. ಉದಾಹರಣೆಗೆ 2 ಎಕರೆ ಒಣ ಭೂಮಿ ಅಥವಾ 1 ಎಕರೆ ತೇವಾಂಶವುಳ್ಳ ಭೂಮಿ.
ಸಾಲ ಮರುಪಾವತಿ: ಸಾಲದ ಮೊತ್ತವು ಬಡ್ಡಿದರಗಳು ಮತ್ತು ಮರುಪಾವತಿ ವೇಳಾಪಟ್ಟಿಗಳಿಗೆ ಒಳಪಟ್ಟಿರುತ್ತದೆ.







