ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರೈತ ಮುಖಂಡ ಗಂಗಾಧರಪ್ಪನವರ ಪುತ್ರ ವಿರೂಪಾಕ್ಷಪ್ಪನವರು ಲಿಂಗೈಕ್ಯ

On: September 8, 2025 12:20 PM
Follow Us:

ಶಿವಮೊಗ್ಗ, ಸೆಪ್ಟೆಂಬರ್ 08, 2025:
ಶಿವಮೊಗ್ಗ ತಾಲ್ಲೂಕಿನ ಹರಮಘಟ್ಟ ಗ್ರಾಮದ
ರೈತ ಸಂಘದ ಹಿರಿಯ ಮುಖಂಡರಾಗಿದ್ದ ದಿ. ಗಂಗಾಧರಪ್ಪನವರ ಪುತ್ರರಾದ ವಿರೂಪಾಕ್ಷಪ್ಪನವರು ಇಂದು ಲಿಂಗೈಕೆರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿರುತ್ತಾರೆ.

ವಿರೂಪಾಕ್ಷಪ್ಪನವರು ತಮ್ಮ ತಂದೆಯ ಹಾದಿಯಲ್ಲೇ ರೈತ ಹೋರಾಟ, ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನಪ್ರಿಯತೆ ಗಳಿಸಿದ್ದರು. ರೈತರ ಹಕ್ಕು, ಭೂಮಿಯ ರಕ್ಷಣೆ, ಬೆಲೆ ಸ್ಥಿರತೆ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಅವರು ಧೈರ್ಯದಿಂದ ಪಾಲ್ಗೊಂಡಿದ್ದರು.

ಅವರ ಅಗಲಿಕೆಯಿಂದ ಕುಟುಂಬ, ಬಂಧುಮಿತ್ರರು, ರೈತ ಸಮುದಾಯ ಹಾಗೂ ಹೋರಾಟಗಾರರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. “ಅವರು ಸರಳ ಬದುಕು, ಸ್ಪಷ್ಟ ಮಾತು, ನ್ಯಾಯದ ಹಾದಿಯಲ್ಲಿದ್ದ ಹೋರಾಟಗಾರರು. ಅವರ ಅಭಾವ ಭರ್ತಿಯಾಗದ ನಷ್ಟ” ಎಂದು ಸಹಪಾಠಿಗಳು ಮತ್ತು ಹೋರಾಟದ ಸಂಗಾತಿಗಳು ಕಣ್ಣೀರಿನಿಂದ ನೆನಪಿಸಿಕೊಂಡರು.

ಮೃತರ ಹಿಂದೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾರೆ.

“ಹೋರಾಟಗಾರನ ದಾರಿ ಮುಗಿದರೂ, ಹೋರಾಟದ ನೆನಪು ಶಾಶ್ವತ”

“ನ್ಯಾಯದ ಹಾದಿಯ ಹೋರಾಟಗಾರ, ಜನಮನದಲ್ಲಿ ಸದಾ ಜೀವಂತ”

ಅವರ ಜೀವನ, ರೈತರ ಹಕ್ಕಿಗಾಗಿ ಹೋರಾಡುವ ತಲೆಮಾರಿನವರಿಗೆ ಶಾಶ್ವತ ಪ್ರೇರಣೆ ಆಗಿ ಉಳಿಯಲಿದೆ.

ವಿರೂಪಾಕ್ಷಪ್ಪನವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಹರಮಘಟ್ಟ ಗ್ರಾಮದಲ್ಲಿ ನಡೆಯಲಿದೆ.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment