ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಕ್ಕಳ ಸಾಧನೆಯನ್ನು ಹಗುರವಾಗಿ ಮಾತನಾಡುವುದು ಸರಿಯಲ್ಲ: ಬೊಮ್ಮಾಯಿ, ವಿಶ್ವನಾಥ್‌ಗೆ ಮಧು ಬಂಗಾರಪ್ಪ ತಿರುಗೇಟು

On: April 27, 2026 12:50 PM
Follow Us:

ಶಿವಮೊಗ್ಗ: ರಾಜ್ಯದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶಗಳ ಕುರಿತು ಅಪಸ್ವರ ಎತ್ತುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಾಯಕ ಹೆಚ್. ವಿಶ್ವನಾಥ್ ಅವರ ಹೇಳಿಕೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ಅಂಕಿ-ಅಂಶಗಳ ಸಮೇತ ಉತ್ತರ ನೀಡಿದರು.

ಮಾಜಿ ಶಿಕ್ಷಣ ಸಚಿವ ಹೆಚ್. ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ವಿಶ್ವನಾಥ್ ಅವರು ಹಿರಿಯರು, ಅವರಿಗೆ ವಯಸ್ಸಾಗಿದೆ. ಆ ವಯಸ್ಸಿಗೆ ನಾನು ಗೌರವ ಕೊಡುತ್ತೇನೆ. ಆದರೆ ಅವರು ಮಕ್ಕಳ ಫಲಿತಾಂಶವನ್ನು ‘ಕಾಪಿ ಹೊಡೆದು ಪಾಸಾಗಿದ್ದಾರೆ’ ಎಂದು ಹೇಳಿರುವುದು ಅತ್ಯಂತ ದುರದೃಷ್ಟಕರ,” ಎಂದರು. “ಲಕ್ಷಾಂತರ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿ ಫಲಿತಾಂಶ ಪಡೆದಿದ್ದಾರೆ. ಅವರ ಸಾಧನೆಯನ್ನು ಇಷ್ಟು ಕೀಳಾಗಿ ಕಾಣುವುದು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಮಾಡುವ ಅವಮಾನ. ವಿಶ್ವನಾಥ್ ಅವರ ಇಂತಹ ಹೇಳಿಕೆಗಳಿಂದ ಮಕ್ಕಳ ಮನಸ್ಸಿಗೆ ನೋವಾಗುತ್ತದೆ. ಅವರು ಮಾಡಿರುವ ಟೀಕೆಗಳಿಗೆ ಆ ಮಕ್ಕಳ ಸಾಧನೆಯೇ ಸರಿಯಾದ ಉತ್ತರ ನೀಡಿದೆ,” ಎಂದು ಅವರು ತಿರುಗೇಟು ನೀಡಿದರು.

“ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುವುದನ್ನು ಬಿಟ್ಟು, ಇಲಾಖೆಯು ತಂದಿರುವ ಬದಲಾವಣೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಲಿ. ಸಾರ್ವಜನಿಕ ವಲಯದಲ್ಲಿ ನಮ್ಮ ಸುಧಾರಣೆಗಳಿಗೆ ಶೇ.95 ರಷ್ಟು ಬೆಂಬಲ ವ್ಯಕ್ತವಾಗಿದೆ,” ಎಂದು ಅವರು ತಿಳಿಸಿದರು.

ಬಸವರಾಜ ಬೊಮ್ಮಾಯಿ ಅವರ ಟೀಕೆಗಳಿಗೆ ಉತ್ತರಿಸಿದ ಸಚಿವರು, “ಬೊಮ್ಮಾಯಿ ಅವರ ಕಾಲದಲ್ಲಿ ಶಿಕ್ಷಣ ಇಲಾಖೆ ಎದುರಿಸುತ್ತಿದ್ದ ಗೊಂದಲಗಳು ಮತ್ತು ಈಗಿನ ಸುಧಾರಣೆಗಳನ್ನು ಅವರು ಗಮನಿಸಬೇಕು. ನಾವು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ‘ವೆಬ್‌ಕಾಸ್ಟಿಂಗ್’ ನಂತಹ ಸುಧಾರಿತ ತಂತ್ರಜ್ಞಾನ ಅಳವಡಿಸಿದ್ದೇವೆ. ಈ ಹಿಂದೆ ಇರದಿದ್ದ ಶಿಸ್ತು ಈಗ ಬಂದಿದೆ,” ಎಂದು ಪ್ರತಿಪಾದಿಸಿದರು.

“ಕೆಲವರು ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಕೇವಲ ಕ್ಯಾಮೆರಾ ಪ್ರದರ್ಶನ ಎಂದು ಟೀಕಿಸುತ್ತಿದ್ದಾರೆ. ಆದರೆ, ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡಲು ಮತ್ತು ಅಕ್ರಮಗಳನ್ನು ತಡೆಯಲು ಇದು ಸಹಕಾರಿಯಾಗಿದೆ. ಅಕ್ರಮವಾಗಿ ಅಂಕ ಪಡೆಯುವುದನ್ನು ತಡೆಯಲೆಂದೇ ಈ ಕ್ರಮ ಕೈಗೊಳ್ಳಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಜಿಲ್ಲೆಯ ಮಳೆ ಹಾನಿಯ ಬಗ್ಗೆ ಮಾತನಾಡಿದ ಸಚಿವರು, ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಲು ಸೂಚಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ನೆರವಾಗಿ ಪರೀಕ್ಷೆ ಬರೆಸಿರುವುದು ಇಲಾಖೆಯ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

​ಈ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಚೇತನ್, ಕಲಗೋಡು ರತ್ನಾಕರ್, ದೇವಿಕುಮಾರ್, ಎನ್.ರಮೇಶ್, ಶರತ್ ಮರಿಯಪ್ಪ, ರಮೇಶ್ ಇತರರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಸಾವಿರಾರು ಅಡಿಕೆ ಮರಗಳು: ಭದ್ರಾವತಿ ತಾಲ್ಲೂಕಿನಾದ್ಯಂತ ಅಪಾರ ಹಾನಿ – ತಕ್ಷಣದ ಪರಿಹಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಗ್ರಹ

ಶಿವಮೊಗ್ಗದಲ್ಲಿ ಮೇ 3 ರಂದು ‘ಪತ್ರಕರ್ತರ ಧ್ವನಿ’ ಸಂಘದ 2ನೇ ವಾರ್ಷಿಕೋತ್ಸವ: ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ

ಬಿ.ಎಸ್.ವೈ ಅಭಿಮಾನೋತ್ಸವ: ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳಿಗೆ ವಿಜಯೇಂದ್ರ, ಕಾರಜೋಳ ಅವರಿಂದ ಅಧಿಕೃತ ಆಹ್ವಾನ

ಚಿತ್ರದುರ್ಗದ ಪುಣ್ಯಭೂಮಿಯಲ್ಲಿ ಬಿಎಸ್‍ವೈ ‘ಅಭಿಮಾನೋತ್ಸವ’: ಐದು ದಶಕಗಳ ಜನಪರ ಹೋರಾಟಕ್ಕೊಂದು ಗೌರವ ನಮನ

ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ವಿಚಾರ: ಜನರಲ್ಲಿ ಅನಾವಶ್ಯಕ ಆತಂಕ ಬೇಡ – ಪರಿಸರ ಹಾನಿಗೆ ನಮ್ಮ ಸ್ಪಷ್ಟ ವಿರೋಧ : ಸಂಸದ ಬಿ.ವೈ. ರಾಘವೇಂದ್ರ

ಸಿರಿಗೆರೆ ತರಳಬಾಳು ಶ್ರೀಗಳ ಪ್ರೇರಣೆಯಿಂದ ಸೂಗೂರು ಗ್ರಾಮದಲ್ಲಿ ಭಕ್ತಿ–ಅಭಿವೃದ್ಧಿಯ ಮಹಾಪರ್ವ: ಹೆಚ್. ಆರ್. ಬಸವರಾಜಪ್ಪ

Leave a Comment