ಶಿವಮೊಗ್ಗ: ಅಖಿಲ ಭಾರತ ವೀರಶೈವ ಮಹಾಸಭಾದ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಅವಿನಾಶ್ ಅವರ ನೂತನ “ದೇಶೀಯ ದರ್ಶಿನಿ” ಹೋಟೆಲ್ ಬಸವೇಶ್ವರ ವೃತ್ತದ ಬಳಿ ಪ್ರಾರಂಭವಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ನೂತನ ಹೋಟೆಲ್ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಉದ್ಯಮ ಕ್ಷೇತ್ರದಲ್ಲಿ ಮುಂದಾಗುತ್ತಿರುವುದು ಸಂತೋಷಕರ ಸಂಗತಿ ಎಂದು ತಿಳಿಸಿ, ಇಂತಹ ಹೊಸ ಉದ್ಯಮಗಳು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಯುವ ಉದ್ಯಮಶೀಲತೆಗೆ ಪ್ರೋತ್ಸಾಹ
”ಯುವ ಉದ್ಯಮಿಗಳ ಪರಿಶ್ರಮ ಮತ್ತು ಸಾಧನೆ ಸಮಾಜದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅವಿನಾಶ್ ಅವರ ಈ ಹೊಸ ಉದ್ಯಮವು ಯಶಸ್ವಿಯಾಗಿ ಬೆಳೆಯಲಿ ಹಾಗೂ ಜನಮನ ಗೆಲ್ಲಲಿ,” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಆರ್. ಮೋಹನ್ ಕುಮಾರ್, ಕಾರ್ಯದರ್ಶಿ ಆರ್. ಪಾಪಣ್ಣ, ಕೆ.ಮೋಹನ್ ಕುಮಾರ್, ಬಸವ ಸಂಗಮದ ಅಧ್ಯಕ್ಷರಾದ ಚೇತನ್ ದುಮ್ಮಳ್ಳಿ, ದೃವಕುಮಾರ್ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ನೂತನ ಹೋಟೆಲ್ಗೆ ಶುಭ ಹಾರೈಸಿದರು.
ನಮ್ಮ ಡಿಟೆಕ್ಟಿವ್ ನ್ಯೂಸ್ 24 ಸುದ್ದಿ ಸಂಸ್ಥೆಯ ಪರವಾಗಿ ಅವಿನಾಶ್ ಅವರಿಗೆ ಶುಭಾಶಯ ಕೋರುತ್ತಾ, “ದೇಶೀಯ ದರ್ಶಿನಿ” ಹೋಟೆಲ್ ಉತ್ತಮ ಸೇವೆ, ಸ್ವಚ್ಛತೆ ಮತ್ತು ರುಚಿಕರ ಆಹಾರದ ಮೂಲಕ ಜನರ ಮೆಚ್ಚುಗೆ ಪಡೆಯಲಿ. ನಿಮ್ಮ ಈ ಹೊಸ ಉದ್ಯಮ ಇನ್ನಷ್ಟು ಉತ್ತುಂಗಕ್ಕೆ ಏರಿ, ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸುಗಳನ್ನು ಸಾಧಿಸಲಿ ಎಂದು ಹಾರೈಸುತ್ತೇವೆ.