ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಚಿಕ್ಕಮಗಳೂರಿನಲ್ಲಿ ತಾಳೆಯೋಲೆ ಹಸ್ತಪ್ರತಿಗಳ ಸ್ವಚ್ಛತೆ ಹಾಗೂ ಡಿಜಿಟಲೀಕರಣ ಶಿಬಿರ

On: August 27, 2025 8:36 PM
Follow Us:

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹಾದಿಕೆರೆ, ಲಕ್ಷ್ಮಿಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಾಳೆಯೋಲೆ ಮತ್ತು ಹಸ್ತಪ್ರತಿ ಗರಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಆಗಸ್ಟ್ 26ರಿಂದ 28ರವರೆಗೆ (ಗುರುವಾರದಿಂದ ಶನಿವಾರದವರೆಗೆ) ನಡೆಯಲಿದೆ.

ಶರಣೆಯ ಅಕ್ಕನಾಗಮ್ಮ ಅವರ ಲಿಂಗಕ್ಯ ಕ್ಷೇತ್ರದ ಮನೆಗಳಲ್ಲಿ ಸಾಕಷ್ಟು ತಾಳೆಯೋಲೆ ಹಸ್ತಪ್ರತಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅವು ನಾಶವಾಗುವ ಮೊದಲು ಸಂರಕ್ಷಿಸುವ ಉದ್ದೇಶದಿಂದ ಈ ಮಹತ್ವದ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ.

ಶಿಬಿರದ ಪ್ರಮುಖ ಅಂಶಗಳು:

  • ಹಸ್ತಪ್ರತಿಗಳನ್ನು ಲೆಮನ್ ಗ್ರಾಸ್ ಎಣ್ಣೆಯಿಂದ ಶುದ್ಧೀಕರಿಸುವುದು.
  • ಹಾಳಾಗುತ್ತಿರುವ ಹಸ್ತಪ್ರತಿಗಳ ಡಿಜಿಟಲೀಕರಣ ಮಾಡಿ ಶಾಶ್ವತವಾಗಿ ಸಂಗ್ರಹಿಸುವ ವ್ಯವಸ್ಥೆ.
  • ಹಳೆಯ ಗರಿಗಳನ್ನು ಹೊಸ ವಸ್ತ್ರದೊಂದಿಗೆ ಪ್ಯಾಕ್ ಮಾಡಿ ಮಾಲೀಕರಿಗೆ ಹಿಂತಿರುಗಿ ನೀಡುವುದು.
  • ಅಪ್ರಕಟಿತ ಕೃತಿಗಳನ್ನು ಭವಿಷ್ಯದಲ್ಲಿ ಪ್ರಕಟಿಸುವ ಸಂದರ್ಭದಲ್ಲಿ, ಸಂಬಂಧಿತ ಕುಟುಂಬಗಳ ವಿವರಗಳೊಂದಿಗೆ ಪ್ರಕಟಿಸುವ ಭರವಸೆ.

ತಾಳೆಯೋಲೆ ಹಸ್ತಪ್ರತಿಗಳಿಗೆ ನಿರ್ದಿಷ್ಟ ಕಾಲಾವಧಿ ಇರುವುದರಿಂದ, ಅವು ಹಾಳಾಗುವ ಮುನ್ನ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಅತಿ ಅಗತ್ಯವಾಗಿದೆ. ಈ ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಪಾರಂಪರಿಕ ಹಸ್ತಪ್ರತಿಗಳನ್ನು ದೀರ್ಘಕಾಲ ಉಳಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.

ಇದೇ ಸಂದರ್ಭದಲ್ಲಿ ಸೇವಾ ಮನೋಭಾವ ಹೊಂದಿರುವವರು ಸ್ವಯಂಸೇವಕರಾಗಿ ಸೇರಿ ತಾಳೆಗರಿಗಳನ್ನು ಸ್ವಚ್ಛಗೊಳಿಸುವುದು, ಜೋಡಿಸುವುದು ಮತ್ತು ಡಿಜಿಟಲೀಕರಣ ಕಾರ್ಯದಲ್ಲಿ ಸಹಕರಿಸಬಹುದಾಗಿದೆ.

ಸಂಪರ್ಕಿಸಲು:

  •  ಶ್ರೀ ಪರಮೇಶ್ವರಪ್ಪ – 78927 03256
  •  ಶ್ರೀ ಪ್ರಕಾಶ H S – 99017 09059
  • ಶ್ರೀ ಗಂಗಾಧರಪ್ಪ – 90087 03380

ಈ ಶಿಬಿರ ಸಂಪೂರ್ಣ ಉಚಿತವಾಗಿದ್ದು, ಜನಸಾಮಾನ್ಯರು ಇದರ ಸದುಪಯೋಗ ಪಡೆಯುವಂತೆ ಸಂಘಟಕರು ಮನವಿ ಮಾಡಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ: ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವೈಯಕ್ತಿಕ–ಕುಟುಂಬ ನಿಂದನೆಗೆ ತೆರೆ ಎಳೆಯಲು ರಾಜಕೀಯ ನಾಯಕರಿಗೆ ಜಗದ್ಗುರುಗಳ ಖಡಕ್ ಸೂಚನೆ,.!

ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ದರ್ಶನ: ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆಯ ವೈಭವ, ಲಕ್ಷಾಂತರ ಭಕ್ತರ ಸಮಾಗಮ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ‘ಮನೆಯೊಳಗೆ ಧರ್ಮ, ಹೊರಗೆ ಸಂವಿಧಾನ’ – ನ್ಯಾಯಮೂರ್ತಿ ಶ್ರೀಶಾನಂದ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ಸಮೂಹ ಮಾಧ್ಯಮ ಸಮಾಜದ ದಿಕ್ಕು ನಿರ್ಧರಿಸುವ ಶಕ್ತಿಯಾಗಿದೆ: ಸಿ.ಎಸ್. ಷಡಾಕ್ಷರಿ

Leave a Comment