ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಪ್ಪು ಸ್ಮರಣಾ ದಿನ: ನಾಲ್ಕು ವರ್ಷ ಕಳೆದರೂ ಅಭಿಮಾನಿಗಳ ಹೃದಯದಲ್ಲಿ ಜೀವಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

On: October 29, 2025 3:00 PM
Follow Us:

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಎಲ್ಲರಿಗೂ ಬಹಳ ಇಷ್ಟ. ಅವರ ಡ್ಯಾನ್ಸ್, ಫೈಟ್, ಆ್ಯಕ್ಟಿಂಗ್ ಎಲ್ಲವೂ ಸೈ ಎನಿಸುವಂತದ್ದು. ಸಿನಿಮಾ ಜೊತೆಗೆ ಸಮಾಜ ಸೇವೆ, ವಿದ್ಯಾದಾನ ಮುಂತಾದ ಕಾರ್ಯಗಳಿಂದ ಜನಮನದಲ್ಲಿ ಅಪ್ಪು ಅಜರಾಮರರಾಗಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದ ಅಪ್ಪು ಅಕಾಲಿಕವಾಗಿ ನಿಧನ ಹೊಂದಿ ಇಂದು ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಕಾಣುತ್ತಿದ್ದಾರೆ.

ಅಕ್ಟೋಬರ್ 29ರ ಬೆಳಗ್ಗಿನಿಂದಲೇ ಅಪ್ಪು ಸ್ಮಾರಕದ ಮುಂದೆ ಅಭಿಮಾನಿಗಳ ದಟ್ಟಣೆ ಕಂಡುಬಂದಿದೆ. ಅಕ್ಟೋಬರ್ 28ರಂದೇ ಸ್ಮಾರಕವನ್ನು ಹೂವುಗಳಿಂದ ಅಲಂಕರಿಸಲಾಗಿದ್ದು, ಇಂದು ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರರು ರಾಘವೇಂದ್ರ ಮತ್ತು ಯುವರಾಜ್‌ಕುಮಾರ್, ಸಹೋದರಿಯರು ಸೇರಿದಂತೆ ಕುಟುಂಬ ಸದಸ್ಯರು ಅಪ್ಪು ನೆನೆದು ಭಾವೋದ್ರಿಕ್ತರಾದರು.

ಸಮಾಧಿ ಬಳಿ ಅಪ್ಪುಗೆ ಇಷ್ಟವಿದ್ದ ಅಡುಗೆಗಳನ್ನು ಬಡಿಸಲಾಗಿದ್ದು, ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಹಾಗೂ ಯುವ ರಾಜ್‌ಕುಮಾರ್ ಅವರು ಅಭಿಮಾನಿಗಳಿಗೆ ಉಪಹಾರ ವಿತರಿಸಿದರು. ಸಾವಿರಾರು ಅಭಿಮಾನಿಗಳು ಕ್ಯೂನಲ್ಲಿ ನಿಂತು ಸ್ಮಾರಕಕ್ಕೆ ಭೇಟಿ ನೀಡಿ “ಅಪ್ಪು ಅಮರ” ಎಂಬ ಘೋಷಣೆ ಕೂಗಿದರು.

ಇದೇ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ನೆನೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಪತ್ನಿ ಅಶ್ವಿನಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ “ಅಪ್ಪು ಅವರ ಸವಿನೆನಪಿನಲ್ಲಿ ನಾಲ್ಕು ವರ್ಷಗಳು… ನಿಮ್ಮ ದೈನಂದಿನ ಕಾರ್ಯಗಳಲ್ಲಿ ಅಪ್ಪುವನ್ನು ಜೀವಂತವಾಗಿಟ್ಟಿರುವ ಎಲ್ಲರಿಗೂ ಅನಂತಾನಂತ ಕೃತಜ್ಞತೆಗಳು” ಎಂದು ಬರೆದು ಅವರ ಚಿತ್ರ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 29, 2021ರಂದು ಕೇವಲ 46ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದ ಅಪ್ಪು, ಬದುಕಿದ್ದಾಗ ಮಾತ್ರವಲ್ಲ, ಇಂದು ಸಹ ಜನಮನದಲ್ಲಿ ಜೀವಂತವಾಗಿದ್ದಾರೆ. ಪುನೀತ್ ಅವರ ಜೀವನ, ಸೇವಾಭಾವ ಮತ್ತು ನಗು—ಎಲ್ಲವೂ ಅಭಿಮಾನಿಗಳ ಹೃದಯದಲ್ಲಿ ಸದಾಕಾಲ ಉಳಿಯುತ್ತವೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಲನಚಿತ್ರ ಲೋಕದ ಅಗ್ರ ತಾರೆ ಮಾತ್ರವಲ್ಲ, ಸೇವಾಭಾವದಿಂದ ಕೂಡಿದ ಮಾನವೀಯ ವ್ಯಕ್ತಿತ್ವದ ಪ್ರತಿರೂಪವಾಗಿದ್ದರು. ತಮ್ಮ ತಂದೆ ಡಾ. ರಾಜ್ ಕುಮಾರ್ ಅವರ ಆದರ್ಶವನ್ನು ಹಿಂಬಾಲಿಸುತ್ತಾ, ಅಪ್ಪು ಅವರು ತಮ್ಮ ಜೀವನವನ್ನು ಕಲೆಯ ಜೊತೆಗೆ ಸಮಾಜ ಸೇವೆಗೂ ಅರ್ಪಿಸಿದ್ದರು. ಅನಾಥಾಶ್ರಮಗಳು, ಶಾಲೆಗಳು, ಶಿಕ್ಷಣ ಯೋಜನೆಗಳು ಮತ್ತು ದಾನಧರ್ಮದಲ್ಲಿ ಅವರು ನೀಡಿದ ಕೊಡುಗೆ ಅಸಾಧಾರಣ. ನಟನೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಜನಮನ ಗೆದ್ದ ಅವರು, ತಮ್ಮ ಸಹೋದರರಾದ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರಂತೆಯೇ ರಾಜ್ಯದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದರು. ಇಂದು, ಅಕ್ಟೋಬರ್ 29ರಂದು, ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಂದು, ಅಪ್ಪು ಅವರ ಬಣ್ಣದ ಬದುಕು, ನಗುವು, ಸೇವಾಭಾವ ಎಲ್ಲವೂ ಕನ್ನಡಿಗರ ಹೃದಯಗಳಲ್ಲಿ ಇನ್ನೂ ಜೀವಂತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

ಪೊಲೀಸ್ ಇಲಾಖೆಯಲ್ಲಿ ‘ಮೇಜರ್ ಸರ್ಜರಿ’: 129 ಇನ್ಸ್‌ಪೆಕ್ಟರ್‌, 23 ಡಿವೈಎಸ್ಪಿಗಳಿಗೆ ವರ್ಗಾವಣೆ; ಬೆಂಗಳೂರು ಸಿಟಿ ಪಟ್ಟಿ ಇನ್ನೂ ಬಾಕಿ

ಸೂಡಾ ಕಾಮಗಾರಿಗಳ ಮೇಲೆ ಭ್ರಷ್ಟಾಚಾರ ನೆರಳು; ಡಿಸಿ ಕಚೇರಿ ಮುಂದೆ ಜೆಡಿಎಸ್ ಪ್ರತಿಭಟನೆ

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

Leave a Comment