ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಪುತ್ರ ಆಕಾಶ್ ಆತ್ಮಹತ್ಯೆ

On: December 5, 2025 11:10 PM
Follow Us:

ಶಿವಮೊಗ್ಗ, ಡಿ.5: ನಗರದ ಪ್ರಸಿದ್ಧ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ (57) ಹಾಗೂ ಪುತ್ರ ಆಕಾಶ್ ಹೊಮ್ಮರಡಿ (32) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡುಗಿಸಿದೆ. ಅಶ್ವತ್ಥನಗರ 5ನೇ ಅಡ್ಡರಸ್ತೆಯ ‘ಸಾನಿಧ್ಯʼ ಮನೆಯಲ್ಲಿ ಸಂಭವಿಸಿದ ಈ ದುರಂತದಲ್ಲಿ ತಾಯಿ-ಮಗ ಇಬ್ಬರೂ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದುಕೊಂಡು ಜೀವತ್ಯಾಗ ಮಾಡಿದ್ದಾರೆ. ಆತ್ಮಹತ್ಯೆಯ ನಿಖರ ಕಾರಣ ಇನ್ನೂ ತಿಳಿದುಬಾರದಿದ್ದರೂ, ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್ ನೋಟ್‌ ಪತ್ತೆ; ಇದೇ ಮನೆಯಲ್ಲಿ ಈಗಾಗಲೇ ನಾಲ್ಕು ಸಾವುಗಳು

ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿಯ ಈ ಕುಟುಂಬವು ಶಿವಮೊಗ್ಗದ ಗಾಂಧಿನಗರದಲ್ಲಿ ‘ಹೊಮ್ಮರಡಿ ಆಸ್ಪತ್ರೆ’ ಮೂಲಕ ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿತ್ತು. ದಶಕ ಹಿಂದೆ ಮಕ್ಕಳ ತಜ್ಞರಾಗಿದ್ದ ಡಾ. ನಾಗರಾಜ ಹೊಮ್ಮರಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಅವರ ಪುತ್ರ ಆಕಾಶ್ ಪತ್ನಿ ನವ್ಯಶ್ರೀ ಕೂಡ ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

ಪತಿ ಮತ್ತು ಸೊಸೆಯ ಸಾವಿನ ಆಘಾತದಿಂದ ಹೊರಬರಲಾಗದೆ, ಡಾ. ಜಯಶ್ರೀ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಆಕಾಶ್ ಸಹ ಜೀವತ್ಯಾಗ ಮಾಡಿರುವುದು ಸ್ಪಷ್ಟವಾಗಿದೆ.

ಆಘಾತದಿಂದ ಹೊರಬರಲು ಮರುಮದುವೆ… ಆದರೆ ಫಲವೇನು?

ತಂದೆ ಮತ್ತು ಪತ್ನಿಯ ಮರಣದಿಂದಾಗಿ ಮನೋವ್ಯಥೆಯಲ್ಲಿ ಮುಳುಗಿದ್ದ ಆಕಾಶ್, ಈ ವರ್ಷ ಮೇ ತಿಂಗಳಲ್ಲಿ ಮರುಮದುವೆಯಾಗಿದ್ದರು. ಆದರೆ, ಸತ್ತ ಇಬ್ಬರಲ್ಲಿ ಒಬ್ಬರು – ತಾಯಿ, ಮತ್ತೊಬ್ಬರು – ಅವರು ಎಂಬ ನೋವಿನ ದುರಂತ ಈಗ ಎದುರಾಗಿದೆ. ಹೆಚ್ಚಿನ ಆಘಾತವೆಂದರೆ, ಎರಡನೇ ಪತ್ನಿಯೇ ಮನೆಯಲ್ಲಿರುವಾಗ ಆಕಾಶ್ ಆತ್ಮಹತ್ಯೆ ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ

ಬೆಳಿಗ್ಗೆ ಆಕಾಶ್ ಕೊಠಡಿಯ ಬಾಗಿಲು ಬಡಿದರೂ ತೆರೆದಿರಲಿಲ್ಲ. ಅನುಮಾನಗೊಂಡ ಸೊಸೆ ಸಂಬಂಧಿಕರಿಗೆ ಮಾಹಿತಿ ನೀಡಿದರು. ಬಾಗಿಲು ಒಡೆದು ನೋಡಿದಾಗ ಆಕಾಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಂತರ ಜಯಶ್ರೀ ಅವರ ಕೊಠಡಿ ತೆರೆದಾಗ ಅವರು ಕೂಡ ನೈಲಾನ್ ಹಗ್ಗಕ್ಕೆ ಕೊರಳೊಡ್ಡಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸಾನಿಧ್ಯʼ ಮನೆಯಲ್ಲಿ ಸರಣಿ ಮರಣ?

ಸ್ಥಳೀಯರ ಹೇಳಿಕೆಯ ಪ್ರಕಾರ, ಈ ಮನೆಯಲ್ಲೇ ಈಗಾಗಲೇ ಐವರು ಅಸಹಜವಾಗಿ ಸಾವನ್ನಪ್ಪಿದ್ದಾರೆ. ಮನೆ ನಿರ್ಮಿಸಿದ ವ್ಯಕ್ತಿಯೂ ಇದೇ ಮನೆಯಲ್ಲಿ ಸಾವನ್ನಪ್ಪಿದ್ದರಂತೆ. ಈಗ ತಾಯಿ-ಮಗ ಆತ್ಮಹತ್ಯೆ ಪ್ರಕರಣವೂ ಸೇರಿ ‘ಸಾನಿಧ್ಯ’ ಮನೆ ಕತ್ತಲೆ ವಿವಾದಕ್ಕೆ ಕಾರಣವಾಗಿದೆ.

ಪೊಲೀಸ್ ತನಿಖೆ ಮುಂದುವರಿಕೆ

ಡೆತ್ ನೋಟ್‌ನ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment