ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪಾಳುಬಿದ್ದ ವೀರಶೈವ ರುದ್ರಭೂಮಿಗೆ ‘ಶಾಂತಿವನ’ ಸ್ಪರ್ಶ: ಶಾಸಕ ಎಸ್.ಆರ್. ವಿಶ್ವನಾಥ್ ಅವರ ವಿಶೇಷ ಕಾಳಜಿಯಲ್ಲಿ ವಿಶ್ವ ಪರಿಸರ ದಿನಾಚರಣೆ

On: June 7, 2026 12:39 PM
Follow Us:

ಯಲಹಂಕ: ದಶಕಗಳ ಕಾಲ ಕಸದ ರಾಶಿಯಿಂದ ಕಂಗಾಲಾಗಿದ್ದ, ಮುಳ್ಳುಗಂಟಿಗಳಿಂದ ಪಾಳುಬಿದ್ದಿದ್ದ ಜಾಗವೊಂದು ಇಂದು ಕಣ್ಣು ಸೆಳೆಯುವ ಸುಂದರ ‘ಶಾಂತಿವನ’ವಾಗಿ ಮಾರ್ಪಟ್ಟಿದೆ! ಯಲಹಂಕ ಕ್ಷೇತ್ರದ ಜನಪ್ರಿಯ ಹಾಗೂ ಹೆಮ್ಮೆಯ ಶಾಸಕರಾದ ಎಸ್.ಆರ್. ವಿಶ್ವನಾಥ್ ಅವರ ದೂರದರ್ಶಿತ್ವ ಮತ್ತು ವೀರಶೈವ ರುದ್ರಭೂಮಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹೇಮಲತಾ ಚಿದಾನಂದ ಅವರ ನಿರಂತರ ಪರಿಶ್ರಮದ ಫಲವಾಗಿ ಚಿಕ್ಕಬೆಟ್ಟಹಳ್ಳಿಯ ವೀರಶೈವ ರುದ್ರಭೂಮಿ ಇಂದು ಸಂಪೂರ್ಣ ಕಾಯಕಲ್ಪ ಪಡೆದಿದೆ.

ವಿಶ್ವ ಪರಿಸರ ದಿನಾಚರಣೆಯ ಪವಿತ್ರ ಸಂದರ್ಭದಲ್ಲಿ, ಈ ನವೀಕೃತ ರುದ್ರಭೂಮಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಸಮಿತಿಯ ನಾಮಫಲಕವನ್ನೂ ಸಹ ಅತ್ಯಂತ ಸಡಗರದಿಂದ ಅನಾವರಣಗೊಳಿಸಲಾಯಿತು.

🌟 ಶಾಸಕರ ಜನಪರ ಕಾಳಜಿ: ರುದ್ರಭೂಮಿ ಮಂಜೂರಾತಿ

ಯಲಹಂಕ ಹೋಬಳಿಯ ಚಿಕ್ಕಬೆಟ್ಟಹಳ್ಳಿಯ ಸರ್ವೆ ನಂಬರ್ 18ರಲ್ಲಿ ವೀರಶೈವ ಸಮುದಾಯಕ್ಕೆ ಪ್ರತ್ಯೇಕ ರುದ್ರಭೂಮಿಯ ಅವಶ್ಯಕತೆ ತೀವ್ರವಾಗಿತ್ತು. ಸಮುದಾಯದ ದಶಕಗಳ ಈ ಬೇಡಿಕೆಯನ್ನು ಅರಿತ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ವಿಶೇಷ ಮುತುವರ್ಜಿ ವಹಿಸಿ ಸರ್ಕಾರದಿಂದ ಜಮೀನನ್ನು ಮಂಜೂರು ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಕೇವಲ ಜಮೀನು ಕೊಡಿಸುವುದಷ್ಟೇ ಅಲ್ಲದೆ, ಸ್ವರ್ಗಸ್ಥರಾದವರ ಅಂತಿಮ ಸಂಸ್ಕಾರ ಗೌರವಯುತವಾಗಿ ನಡೆಯಬೇಕು ಎಂಬ ವಿಶಾಲ ಮನೋಭವ ಚಿಂತನೆಯಿಂದ, ಈ ಜಾಗವನ್ನು ಒಂದು ಪವಿತ್ರ ವನದಂತೆ ರೂಪಿಸಲು ಶಾಸಕರು ಬೆನ್ನೆಲುಬಾಗಿ ನಿಂತಿದ್ದಾರೆ.

🌟 ಶ್ರೀಮತಿ ಹೇಮಲತಾ ಚಿದಾನಂದ ಅವರ ದಕ್ಷ ನಾಯಕತ್ವ

ಜಾಗ ಮಂಜೂರಾದ ಬಳಿಕ ಅದರ ಸಂಪೂರ್ಣ ಉಸ್ತುವಾರಿ ಹೊತ್ತ ವೀರಶೈವ ರುದ್ರಭೂಮಿ (ರಿ) ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹೇಮಲತಾ ಚಿದಾನಂದ ಅವರ ಕಾರ್ಯದಕ್ಷತೆ ನಿಜಕ್ಕೂ ಶ್ಲಾಘನೀಯ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ವೀರಶೈವ ಸಮುದಾಯದ ಸಂಸ್ಕಾರ ಮತ್ತು ಸಂಸ್ಕೃತಿಗೆ ತಕ್ಕಂತೆ ಪ್ರತ್ಯೇಕ ರುದ್ರಭೂಮಿ ಬೇಕೆಂದು ಸುಮಾರು 20-30 ವರ್ಷಗಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಐದು ವರ್ಷಗಳ ಹಿಂದೆ ನಾವು ಶಾಸಕರಲ್ಲಿ ಕಳಕಳಿಯ ವಿನಂತಿ ಮಾಡಿದಾಗ, ಅವರು ತಕ್ಷಣ ಸ್ಪಂದಿಸಿ ಜಮೀನು ಹಸ್ತಾಂತರಿಸುವಂತೆ ಮಾಡಿದರು. ಅಲ್ಲದೆ ಸಮಿತಿ ರಚಿಸಿ ಇದನ್ನು ಮುನ್ನಡೆಸಲು ಪ್ರೋತ್ಸಾಹ ನೀಡಿದರು” ಎಂದು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

​ಹೇಮಲತಾ ಚಿದಾನಂದ ಅವರ ನೇತೃತ್ವದ ಸಮಿತಿಯು ಕೈಕೊಂಡ ಕೆಲಸಗಳು ಸಾಮಾನ್ಯದ್ದಲ್ಲ. ಹಿಂದೆ ಕಸದ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟು ಅಕ್ಕಪಕ್ಕದವರಿಗೂ ತೊಂದರೆ ಕೊಡುತ್ತಿದ್ದ ಈ ಜಾಗದಿಂದ ಸುಮಾರು 20 ಲೋಡ್‌ಗೂ ಹೆಚ್ಚು ಕಸವನ್ನು ರಾತ್ರಿ ಹಗಲೆನ್ನದೆ ಶ್ರಮಿಸಿ ತೆರವುಗೊಳಿಸಲಾಯಿತು. ಇಳಿಜಾರಾಗಿದ್ದ ಹಳ್ಳ-ಕೊಳ್ಳದ ಭೂಮಿಗೆ ಮಣ್ಣು ಹಾಕಿ ಸಮತಟ್ಟುಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.

​ಸಮಿತಿಯ ಈ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಷಣವೇ ಹೆಗಲು ಕೊಟ್ಟ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಸುಮಾರು 30 ರಿಂದ 40 ಲಕ್ಷ ರೂಪಾಯಿಗಳ ಭಾರಿ ವೆಚ್ಚದಲ್ಲಿ ರುದ್ರಭೂಮಿಯ ಸುತ್ತಲೂ ಭದ್ರವಾದ ಕಾಂಪೌಂಡ್ ಗೋಡೆ ಹಾಗೂ ಹೊರಗಿನಿಂದ ಯಾರೂ ಕಸ ಹಾಕದಂತೆ ಅತ್ಯಂತ ಎತ್ತರದ ಶೀಟ್‌ಗಳನ್ನು ಅಳವಡಿಸಿಕೊಟ್ಟಿದ್ದಾರೆ. ಈ ಮೂಲಕ ಈ ಭಾಗದ ಜನರ ಬಹುದೊಡ್ಡ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಕ್ಕಂತಾಗಿದೆ.

​ಸುಧಾರಣೆಗೊಂಡ ಈ ಜಾಗದಲ್ಲಿ ನೆನ್ನೆಯ ದಿನ ವಿಶ್ವ ಪರಿಸರ ದಿನದ ಅಂಗವಾಗಿ ಹಸಿರೀಕರಣಕ್ಕೆ ಒತ್ತು ನೀಡಲಾಯಿತು. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತರಲಾಗಿದ್ದ ವಿವಿಧ ಅಪರೂಪದ ಹಾಗೂ ಉಪಯುಕ್ತ ಜಾತಿಯ ಸುಮಾರು 100ಕ್ಕೂ ಹೆಚ್ಚು ಸಸಿಗಳನ್ನು ಶಾಸಕರ ಸಮ್ಮುಖದಲ್ಲಿ ನೆಡಲಾಯಿತು. ಈ ಸಸಿಗಳು ಬೆಳೆದು ನಿಂತರೆ ಈ ರುದ್ರಭೂಮಿ ನಿಜವಾದ ಅರ್ಥದಲ್ಲಿ “ಶಾಂತಿ ವನ”ವಾಗಿ ಕಂಗೊಳಿಸಲಿದೆ.

​ಈ ಯಶಸ್ವಿ ಕಾರ್ಯಕ್ರಮದಲ್ಲಿ ವೀರಶೈವ ರುದ್ರಭೂಮಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಕುಮಾರ್ ಬಿ., ಸ್ಥಳೀಯ ವೀರಶೈವ ಸಮುದಾಯದ ಹಿರಿಯ ಮುಖಂಡರು, ಪ್ರಮುಖರು ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಯಲಹಂಕದ ಅಭಿವೃದ್ಧಿ ಪಥದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಿದ್ದಕ್ಕೆ ಸಾಕ್ಷಿಯಾದರು. ಶಾಸಕರ ದಣಿವರಿಯದ ಸೇವೆ ಹಾಗೂ ಸಮಿತಿಯ ಅಧ್ಯಕ್ಷರ ದಿಟ್ಟ ನಿರ್ಧಾರಗಳು ಇಂದು ಇಡೀ ಕ್ಷೇತ್ರಕ್ಕೇ ಮಾದರಿಯಾಗಿವೆ.

K.M.Sathish Gowda

Join WhatsApp

Join Now

Facebook

Join Now

Read more

​ಯುವಜನರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದರೆ ಕಠಿಣ ಕ್ರಮ: ಪಬ್, ಬಾರ್‌ಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

​’ಇರುವುದೊಂದೇ ಭೂಮಿ, ರಕ್ಷಣೆ ನಮ್ಮ ಹೊಣೆ: ಪ್ರಕೃತಿ ಮೇಲಿನ ದಬ್ಬಾಳಿಕೆ ನಿಲ್ಲಿಸಿ ಮನುಷ್ಯನೇ ತಪ್ಪು ಸರಿಪಡಿಸಿಕೊಳ್ಳಲಿ’ – ಜಿ.ಡಿ. ಮಂಜುನಾಥ್

ಬಿಜೆಪಿಯಿಂದ ರಾಜ್ಯಸಭೆಗೆ ಪ್ರೊ. ಎಂ. ನಾಗರಾಜ್‌ ಆಯ್ಕೆ: ದೇವೇಗೌಡ, ಸದಾನಂದಗೌಡರಿಗೆ ತಪ್ಪಿದ ಅವಕಾಶ

​”ಬಂಡವಾಳಶಾಹಿಗಳ ಪರವೋ, ಜನರ ಪರವೋ ಸರ್ಕಾರ ಸ್ಪಷ್ಟಪಡಿಸಲಿ; ಕಾನೂನು ಮೀರಿದ ಅಧಿಕಾರಿಗಳು ಜೈಲು ಸೇರುವುದು ಗ್ಯಾರಂಟಿ” – ಕೊಪ್ಪಳದಲ್ಲಿ ಹೆಚ್.ಆರ್. ಬಸವರಾಜಪ್ಪ ಆಕ್ರೋಶ!

​ದಮನಿತರ ಆಶಾಕಿರಣ ‘ಪಿಟಿಸಿಎಲ್’ ಕಾಯ್ದೆ: ಭೂಮಿ ವಂಚಿತರ ಹಕ್ಕಿಗಾಗಿ ಗಾಂಧಿ ಭವನದಲ್ಲಿ ಮೊಳಗಿದ ಐತಿಹಾಸಿಕ ಹೋರಾಟದ ಧ್ವನಿ!

ಸೂಗೂರು ಗ್ರಾಮದಲ್ಲಿ ಧಾರ್ಮಿಕ ಸಂಭ್ರಮ: ಜೂನ್ 10 ರಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮಸಭೆ

Leave a Comment