ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​’ಇರುವುದೊಂದೇ ಭೂಮಿ, ರಕ್ಷಣೆ ನಮ್ಮ ಹೊಣೆ: ಪ್ರಕೃತಿ ಮೇಲಿನ ದಬ್ಬಾಳಿಕೆ ನಿಲ್ಲಿಸಿ ಮನುಷ್ಯನೇ ತಪ್ಪು ಸರಿಪಡಿಸಿಕೊಳ್ಳಲಿ’ – ಜಿ.ಡಿ. ಮಂಜುನಾಥ್

On: June 8, 2026 6:36 PM
Follow Us:

​ನಗರದ ಶಾಂತವೇರಿ ಗೋಪಾಲಗೌಡ ಬಡಾವಣೆಯ ಕ್ರೀಡಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಗೋಪಾಲಗೌಡ ಬಡಾವಣೆಯ ಡಿ-ಬ್ಲಾಕ್ ನಿವಾಸಿಗಳು, ಶ್ರೀ ಸಿದ್ಧಿ ವಿನಾಯಕ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಚಂದನ ಪಾರ್ಕಿನ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

🌱 ‘ಇರುವುದೊಂದೇ ಭೂಮಿ, ರಕ್ಷಣೆ ನಮ್ಮ ಹೊಣೆ’

ಗಿಡ ನೆಟ್ಟು ಮಾತನಾಡಿದ ಜಿ.ಡಿ. ಮಂಜುನಾಥ್ ಅವರು, ಪ್ರಕೃತಿಯ ಮೇಲಿನ ಮಾನವನ ಹಸ್ತಕ್ಷೇಪ ಮತ್ತು ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

“ಇಂದು ತಂತ್ರಜ್ಞಾನ ಮತ್ತು ನಗರೀಕರಣದ ಹೆಸರಿನಲ್ಲಿ ಪರಿಸರ ತೀವ್ರವಾಗಿ ಕಲುಷಿತಗೊಳ್ಳುತ್ತಿದೆ. ಮಾನವನು ತನ್ನ ಸ್ವಾರ್ಥಕ್ಕಾಗಿ ಮಾಡಿದ ತಪ್ಪುಗಳ ಪರಿಣಾಮವನ್ನು ಇಂದು ನಾವೆಲ್ಲರೂ ಎದುರಿಸುತ್ತಿದ್ದೇವೆ. ನಾವು ಮಾಡಿದ ತಪ್ಪನ್ನು ನಾವೇ ತಿದ್ದಿಕೊಳ್ಳಬೇಕಿದೆ. ‘ಇರುವುದೊಂದೇ ಭೂಮಿ’ ಎಂಬ ಸತ್ಯವನ್ನು ಅರಿತು, ಅದನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬರೂ ಕನಿಷ್ಠ ಒಂದೊಂದು ಗಿಡವನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು,” ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಆರ್. ರಾಜಶೇಖರ್ ಅವರು ಮಾತನಾಡಿ, ಪರಿಸರ ಜಾಗೃತಿ ಕೇವಲ ಭಾಷಣಕ್ಕೆ ಸೀಮಿತವಾಗದೆ ಕ್ರಿಯಾರೂಪಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

​ಈ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಪದಾಧಿಕಾರಿಗಳಾದ ಗೀತೇಂದ್ರ ಗೌಡ್ರು, ಗುರುರಾಜ್ ಎಲ್., ಜಿ.ಎಸ್. ಶಿವಕುಮಾರ್, ಅಶೋಕ್, ಬೋರೇಗೌಡರು, ರವಿ, ಬಸವರಾಜ್, ರಂಗಣ್ಣ, ಮಲ್ಲಿಕಾರ್ಜುನ, ರವಿಕುಮಾರ್, ವಿಜಯ್ ಕುಮಾರ್ ಸೇರಿದಂತೆ ಬಡಾವಣೆಯ ನೂರಾರು ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳು ಉಪಸ್ಥಿತರಿದ್ದು, ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

​ಯುವಜನರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದರೆ ಕಠಿಣ ಕ್ರಮ: ಪಬ್, ಬಾರ್‌ಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

ಬಿಜೆಪಿಯಿಂದ ರಾಜ್ಯಸಭೆಗೆ ಪ್ರೊ. ಎಂ. ನಾಗರಾಜ್‌ ಆಯ್ಕೆ: ದೇವೇಗೌಡ, ಸದಾನಂದಗೌಡರಿಗೆ ತಪ್ಪಿದ ಅವಕಾಶ

​”ಬಂಡವಾಳಶಾಹಿಗಳ ಪರವೋ, ಜನರ ಪರವೋ ಸರ್ಕಾರ ಸ್ಪಷ್ಟಪಡಿಸಲಿ; ಕಾನೂನು ಮೀರಿದ ಅಧಿಕಾರಿಗಳು ಜೈಲು ಸೇರುವುದು ಗ್ಯಾರಂಟಿ” – ಕೊಪ್ಪಳದಲ್ಲಿ ಹೆಚ್.ಆರ್. ಬಸವರಾಜಪ್ಪ ಆಕ್ರೋಶ!

ಪಾಳುಬಿದ್ದ ವೀರಶೈವ ರುದ್ರಭೂಮಿಗೆ ‘ಶಾಂತಿವನ’ ಸ್ಪರ್ಶ: ಶಾಸಕ ಎಸ್.ಆರ್. ವಿಶ್ವನಾಥ್ ಅವರ ವಿಶೇಷ ಕಾಳಜಿಯಲ್ಲಿ ವಿಶ್ವ ಪರಿಸರ ದಿನಾಚರಣೆ

​ದಮನಿತರ ಆಶಾಕಿರಣ ‘ಪಿಟಿಸಿಎಲ್’ ಕಾಯ್ದೆ: ಭೂಮಿ ವಂಚಿತರ ಹಕ್ಕಿಗಾಗಿ ಗಾಂಧಿ ಭವನದಲ್ಲಿ ಮೊಳಗಿದ ಐತಿಹಾಸಿಕ ಹೋರಾಟದ ಧ್ವನಿ!

ಸೂಗೂರು ಗ್ರಾಮದಲ್ಲಿ ಧಾರ್ಮಿಕ ಸಂಭ್ರಮ: ಜೂನ್ 10 ರಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮಸಭೆ

Leave a Comment