ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಡ್ಡ ಮತದಾನ ಮಾಡಿದ ‘ಮೀರ್ ಸಾದಿಕ’ರಿಗೆ ಕ್ಷಮೆಯಿಲ್ಲ: ಬಿಜೆಪಿ ಶಾಸಕರಿಗೆ ವಿಜಯೇಂದ್ರ ಖಡಕ್ ಎಚ್ಚರಿಕೆ!

On: June 19, 2026 1:40 PM
Follow Us:

​ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸದೆ, ಪಕ್ಷದ ಶಿಸ್ತನ್ನು ಉಲ್ಲಂಘಿಸಿ ‘ಅಡ್ಡ ಮತದಾನ’ ಮಾಡಿದವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಹವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

​ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಪಕ್ಷದ ಮೀರ್ ಸಾದಿಕರ ಕೃತ್ಯವನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ಅಡ್ಡ ಮತದಾನದ ಕಹಿ

ಚುನಾವಣಾ ತಂತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, “ಎಂಟತ್ತು ದಿನಗಳ ಹಿಂದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೂರವಾಣಿ ಕರೆ ಮಾಡಿ, ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚಿಸಿದ್ದರು. ‘ಒಳ್ಳೆಯ ಉದ್ದೇಶದಿಂದ ಒಟ್ಟಾಗಿ ಪೈಟ್ ಮಾಡೋಣ’ ಎಂಬ ಅವರ ಸಲಹೆಗೆ ನಾನು ಸಹಮತ ವ್ಯಕ್ತಪಡಿಸಿದ್ದೆ. ಎರಡೂ ಪಕ್ಷಗಳ ಗುರಿ ಒಂದೇ ಆಗಿತ್ತು. ಆದರೆ, ನಿನ್ನೆ ನಡೆದ ಮತದಾನದಲ್ಲಿ ಜೆಡಿಎಸ್‌ನಿಂದ 6-7 ಹಾಗೂ ಬಿಜೆಪಿಯಿಂದ 4-5 ಮತಗಳು ಅಡ್ಡ ಮತದಾನವಾಗಿರುವುದು ಎರಡೂ ಪಕ್ಷಗಳಿಗೆ ನೋವು ತಂದಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ಹೈಕಮಾಂಡ್‌ಗೆ ವರದಿ: “ಗೆರೆ ಎಳೆಯುವ ಕೆಲಸ ಮಾಡುತ್ತೇವೆ”

ಅಡ್ಡ ಮತದಾನ ಮಾಡಿದವರು ಯಾರು ಎಂಬ ಮಾಹಿತಿ ಲಭ್ಯವಿದ್ದು, ಇದರ ಸಂಪೂರ್ಣ ವಿವರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಲು ಸಮಯ ಕೋರಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

“ಬಿಜೆಪಿ ಟಿಕೆಟ್ ಪಡೆದು ಗೆದ್ದು, ಇಂತಹ ಕೆಲಸ ಮಾಡುತ್ತಾರೆ ಎಂದರೆ ಅವರನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಶಾಸಕರಿಗೆ ಪಕ್ಷದ ವತಿಯಿಂದಲೇ ಸೂಕ್ತ ‘ಗೆರೆ ಎಳೆಯುವ’ (ಶಿಸ್ತು ಕ್ರಮ) ಕೆಲಸ ಮಾಡಲಾಗುವುದು. ಎಲ್ಲದಕ್ಕೂ ಒಂದು ಮಿತಿ ಇದೆ. ಪಕ್ಷದ ಆಂತರಿಕ ಗೊಂದಲದಿಂದ ಕಾರ್ಯಕರ್ತರು ಈಗಾಗಲೇ ನೊಂದಿದ್ದಾರೆ, ಈಗಿನ ಈ ಬೆಳವಣಿಗೆ ಮತ್ತಷ್ಟು ನೋವು ಉಂಟುಮಾಡಿದೆ. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ,” ಎಂದು ದೃಢವಾಗಿ ನುಡಿದರು.

“ಕುದುರೆ ಓಡುವ ಸಮಯವೂ ಬರುತ್ತದೆ, ಬೀಳುವ ಸಮಯವೂ ಬರುತ್ತದೆ”

ಡಿ.ಕೆ. ಶಿವಕುಮಾರ್ ಅವರನ್ನು ‘ಚಾಣಕ್ಯ’ ಎಂದು ಕರೆಯುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ರಾಜ್ಯದ ಜನರು ಬಹಳಷ್ಟು ಜನ ‘ಚಾಣಕ್ಯ’ರನ್ನು ನೋಡಿದ್ದಾರೆ. ಕುದುರೆ ಓಡುವ ಸಮಯವಿದ್ದರೆ, ಬೀಳುವ ಸಮಯವೂ ಬರುತ್ತದೆ. ಬಿಜೆಪಿಗೆ ಇಂತಹ ಸವಾಲುಗಳನ್ನು ಎದುರಿಸುವ ಶಕ್ತಿ, ಸಂಘಟನೆ ಮತ್ತು ಕಾರ್ಯಕರ್ತರ ಬಲವಿದೆ. ಯಾರನ್ನು, ಯಾವಾಗ ಮತ್ತು ಹೇಗೆ ಬಗ್ಗಿಸಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ,” ಎಂದು ತಿರುಗೇಟು ನೀಡಿದರು.

ತಮ್ಮ ಹೋರಾಟದ ಹಾದಿಯ ಬಗ್ಗೆ ಮಾತನಾಡಿದ ಅವರು, “ಸರ್ಕಾರ ಯಾರೇ ನಡೆಸಲಿ, ನಾವು ಅಂಜುವ ಪ್ರಶ್ನೆಯೇ ಇಲ್ಲ. ಸರ್ಕಾರವನ್ನು ಬಗ್ಗಿಸುವ ಶಕ್ತಿ ನಮಗಿದೆ. ಇಂತಹ ಸಣ್ಣಪುಟ್ಟ ಘಟನೆಗಳಿಂದ ವಿಚಲಿತರಾಗಿ ನಾವು ಎಲ್ಲಿಗೂ ಹೋಗುವುದಿಲ್ಲ. ಎಲ್ಲವನ್ನೂ ಅರಗಿಸಿಕೊಳ್ಳುವ ಮತ್ತು ಎದುರಿಸುವ ತಾಕತ್ತು ನಮಗಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ರಾಜ್ಯದ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಧಾರಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಮೆಚ್ಚುಗೆ

ವಿಧಾನ ಪರಿಷತ್ ಸಮರ: ಮೈತ್ರಿಕೂಟಕ್ಕೆ ಬಿಗ್ ಶಾಕ್!,11 ಶಾಸಕರ ಅಡ್ಡ ಮತದಾನ; ಮೈತ್ರಿಕೂಟದ ಕೋಟೆಗೆ ಲಗ್ಗೆ ಇಟ್ಟು ‘ಚೆಕ್‌ಮೇಟ್’ ಇಟ್ಟ ಡಿ.ಕೆ. ಶಿವಕುಮಾರ್!

​‘ಅನ್ನ ಕೊಡುವ ರೈತರನ್ನು ಬಿಟ್ಟು ಸರ್ಕಾರ ರಿಯಲ್ ಎಸ್ಟೇಟ್ ಪರ ನಿಂತಿದೆ’: ಬಿಡದಿ ಭೂಸ್ವಾಧೀನದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

​”ಫಲವತ್ತಾದ ಬಿಡದಿ ಭೂಮಿ ಟೌನ್‌ಶಿಪ್‌ಗೆ ಬಲಿಯಾಗಲು ಬಿಡುವುದಿಲ್ಲ; ಕೃಷಿ ಭೂಮಿಗೆ ಕೈಹಾಕಿದರೆ ಸುಮ್ಮನಿರಲ್ಲ!”: ಬೈರಮಂಗಲ ಧರಣಿಯಲ್ಲಿ ಹೆಚ್.ಆರ್. ಬಸವರಾಜಪ್ಪ ಎಚ್ಚರಿಕೆ

ಸಚಿವ ಈಶ್ವರ ಖಂಡ್ರೆ ಭವಿಷ್ಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತ: ಶ್ರೀ ರಂಭಾಪುರಿ ಜಗದ್ಗುರುಗಳ ಭವಿಷ್ಯ

ನಮಗೆ ನಿಮ್ಮ ‘ಫ್ರೀ ಬಸ್’ ಬೇಡ, ಟೈಮಿಗೆ ಬಸ್ ಕೊಡಿ! ಹೊಸನಗರ ಮಾರ್ಗದಲ್ಲಿ ಸಾರಿಗೆ ಇಲಾಖೆಯ ನಾಟಕಕ್ಕೆ ಬ್ರೇಕ್ ಹಾಕಿ ಸಚಿವ ಬೈರತಿ ಸುರೇಶ್ ಅವರೇ!

Leave a Comment