ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಸರ್ವರ್ ಡೌನ್’ ಎನ್ನುವುದು ‘ಗ್ರಹಚಾರ ಸರಿ ಇಲ್ಲ’ ಎಂದು ಹೇಳುವ ಮಾತಿನಂತೆ!

On: August 1, 2025 11:09 PM
Follow Us:

ಅನೇಕ ವೇಳೆ ನಾವು ಸರಿಯಾದ ರೀತಿಯಲ್ಲಿ, ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು  ಮಾಡಿದ್ದರೂ ಫಲ ಕಾಣದಿದ್ದಾಗ ಗ್ರಹಚಾರ ಸರಿ ಇಲ್ಲ ಎಂದು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತೇವೆ!

 ಅಂತೆಯೇ ಇಂದಿನ ಕಂಪ್ಯೂಟರ್ ಯುಗದಲ್ಲಿ  ಸಾರ್ವಜನಿಕ ಕಛೇರಿಗಳ , ಇಲಾಖೆಗಳ ಕೆಲಸ ಕಂಪ್ಯೂಟರ್ ನ ಮೇಲೆಯೇ ಅವಲಂಬಿಸಿದ್ದು, ಸಾರ್ವಜನಿಕರು ಪ್ರತಿನಿತ್ಯ ಒಂದಲ್ಲ ಒಂದು ಕೆಲಸಕ್ಕಾಗಿ  ಕಛೇರಿಗಳಿಗೆ ಹೋದಾಗ ಸರ್ವರ್ ಡೌನ್ ಎನ್ನುವ  ಇಲಾಖಾ ಸಿಬ್ಬಂದಿ ಗಳ ಉತ್ತರ  ‘ಕೈ ಕಟ್, ಬಾಯಿ ಮುಚ್ಚ್’ ಎಂದಂತಾಗಿ ಸುಮ್ಮನೆ ಕೂರುವಂತಾಗುತ್ತದೆ!

ಕಂಪ್ಯೂಟರ್ ಬಳಕೆ ಬಂದ ನಂತರ ಎಷ್ಟೋ ಇಲಾಖೆ ಗಳ ಕೆಲಸಕ್ಕೆ ವೇಗ ಮತ್ತು ನಿಖರತೆ ಬಂದಿದೆಯಾದರೂ ಈ ಸರ್ವರ್ ಡೌನ್ ಎನ್ನುವ ಭೂತ ಎಲ್ಲಾ  ಚಟುವಟಿಕೆಗಳನ್ನು ಬಂದ್ ಮಾಡಿಸಿ ನಮಗೆ ಭೂತಕಾಲದ ಪೇಪರು, ಪೆನ್ ಬಳಕೆನೇ ಸರಿ ಎನಿಸುವಂತೆ ಮಾಡಿಬಿಡುತ್ತದೆ!

ಇತ್ತೀಚೆಗೆ ಕೆ.ಎಸ್. ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ  ಬಸ್ ಟಿಕೆಟ್ ರಿಸರ್ವೇಶನ್ ಮಾಡಿಸಲು ಹೋದಾಗ ಬೆಳಗಿನಿಂದ ಸರ್ವರ್ ಇಲ್ಲದಿರುವುದಕ್ಕೆ ‘ಸಹಕರಿಸಿ’ ಎನ್ನುವ ಬೋರ್ಡ್ ನೋಡಿ  ‘ಗ್ರಹಚಾರ ಸರಿ ಇಲ್ಲ’ ಎಂದು ಸಮಾಧಾನ ಮಾಡಿ ಕೊಂಡು ವಾಪಾಸು ಬಂದೆ.

ನಂದೇನು ಮಹಾ! ತಾಲ್ಲೂಕು ಆಫೀಸು, ಪಾಲಿಕೆ, ಸಬ್ ರಿಜಿಸ್ಟ್ರಾರ್ ಆಫೀಸು, ಆ ಕಛೇರಿ,ಈ ಕಛೇರಿಗಳಲ್ಲಿ ನ‌ಮ್ದೂ ಅದೇ ಕಥೆ ಎನ್ನುವ ದೊಡ್ಡ ಸಂಖ್ಯೆಯ ನಮ್ಮವರ ಮುಂದೆ !

ನಿರುದ್ಯೋಗಿಗಳದ್ದು ಕೆಲಸಕ್ಕಾಗಿ ಅಲೆದಾಟ, ಸಾರ್ವಜನಿಕರದ್ದೂ ಕೆಲಸಕ್ಕಾಗಿ ಅಲೆದಾಟ; ಅಲ್ಲಲ್ಲ, ತಂತ್ರಜ್ಞಾನದ ಹಿಂದೆ ಓಡಾಟ!!!!

  • ತ್ಯಾಗರಾಜ ಮಿತ್ಯಾಂತ.

K.M.Sathish Gowda

Join WhatsApp

Join Now

Facebook

Join Now

Read more

ಬಿಎಸ್‌ವೈ ಅಭಿಮಾನೋತ್ಸವಕ್ಕೆ ‘ವೈದ್ಯಕೀಯ ಕವಚ’: ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಸಂಜೀವಿನಿಯಾದ ಡಾ.ಲಕ್ಷ್ಮಣ್, ಡಾ. ಚನ್ನಮಲ್ಲಯ್ಯ, ಡಾ.ನಾರಾಯಣ್ ತಂಡ

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಮಾದರಿ: ಎಸ್‌ಪಿಜಿ ಬೆಂಗಾವಲು ಪಡೆಯಲ್ಲಿ 50% ಕಡಿತಕ್ಕೆ ಸೂಚನೆ

ದೇಶಕ್ಕೆ ಬುದ್ಧಿ ಹೇಳುವ ಕೇಂದ್ರಕ್ಕೆ ಒಂದು ಪರೀಕ್ಷೆ ನಡೆಸಲಾಗುತ್ತಿಲ್ಲವೇ? : ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಬಸವೇಶ್ವರ ಸೊಸೈಟಿಯ ಶತಮಾನೋತ್ಸವ ಸಂಭ್ರಮ: ಮೇ 16 ಮತ್ತು 17ರಂದು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ

ವೈದ್ಯಕೀಯ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ನೀಟ್ 2026 ರದ್ದು; ಶೀಘ್ರದಲ್ಲೇ ಮರುಪರೀಕ್ಷೆಯ ಹೊಸ ದಿನಾಂಕ ಘೋಷಣೆ

ಬಿಎಸ್‌ವೈ ಅಭಿಮಾನೋತ್ಸವದ ಅಭೂತಪೂರ್ವ ಯಶಸ್ಸು: ನಾಡಿನ ಜನತೆ ಹಾಗೂ ಆಗಮಿಸಿದ ಗಣ್ಯರಿಗೆ ಸಂಸದ ಬಿ.ವೈ. ರಾಘವೇಂದ್ರ ಕೃತಜ್ಞತೆ

Leave a Comment