ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಗಣೇಶ ವಿಸರ್ಜನೆ ವೇಳೆ ಮದ್ದೂರಿನಲ್ಲಿ ಕಲ್ಲು ತೂರಾಟ, 22 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

On: September 8, 2025 9:53 PM
Follow Us:

ಮಂಡ್ಯ, ಸೆ. 8, 2025: ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಸೆಪ್ಟೆಂಬರ್ 7 ರಂದು ಭಾನುವಾರ ರಾತ್ರಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟದ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಹೋಮ್ಗಾರ್ಡ್ಗಳನ್ನು ಸೇರಿದಂತೆ ಒಟ್ಟು 8 ಜನರು ಗಾಯಗೊಂಡಿದ್ದಾರೆ. ಘಟನೆ ಸಂಬಂಧಿ 22 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಂಗ ಕ್ರಮ: ಮದ್ದೂರಿನ 2ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಸೋಮವಾರ ಈ ಆರೋಪಿಗಳನ್ನು ಹಾಜರುಪಡಿಸಿದ ನಂತರ, ಕೋರ್ಟ್ 22 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳ ಪಟ್ಟಿ ಈಂತಿದೆ: ಮೊಹಮ್ಮದ್ ಆವೇಜ್ ಅಲಿಯಾಸ್ ಮುಳ್ಳು, ಮೊಹಮ್ಮದ್ ಇರ್ಫಾನ್ ಅಲಿಯಾಸ್ ಮಿಯಾ, ನವಾಜ್ ಖಾನ್ ಅಲಿಯಾಸ್ ನವಾಜ್, ಇಮ್ರಾನ್ ಪಾಷಾ ಅಲಿಯಾಸ್ ಇಮ್ರಾನ್, ಉಮರ್ ಫಾರೂಕ್ ಅಲಿಯಾಸ್ ಉಮರ್, ಸಯ್ಯದ್ ದಸ್ತಗಿರ್ ಅಲಿಯಾಸ್ ಸಯ್ಯದ್ ರಶೀದ್, ಖಾಸಿಫ್ ಅಹ್ಮದ್ ಅಲಿಯಾಸ್ ಖಾಸಿಫ್, ಅಹ್ಮದ್ ಸಲ್ಮಾನ್ ಅಲಿಯಾಸ್ ಮುಕ್ಕುಲ್ಲಾ, ಮುಸವೀರ್ ಪಾಷಾ ಅಲಿಯಾಸ್ ಒಡೆಯ, ಕಲಾಂದರ್ ಖಾನ್, ಸುಮೇರ್ ಪಾಷಾ, ಮೊಹಮ್ಮದ್ ಅಜೀಜ್, ಇನಾಯತ್ ಪಾಷಾ, ಮೊಹಮ್ಮದ್ ಖಲೀಂ ಅಲಿಯಾಸ್ ಕೈಫ್ ಮತ್ತು ಇತರರು.

ಘಟನೆಯ ವಿವರ: ಸ್ಥಳೀಯರು ವರದಿ ಮಾಡಿರುವಂತೆ, ಮೆರವಣಿಗೆ ವೇಳೆಯಲ್ಲಿ ಗಣೇಶ ಮೆರವಣಿಗೆ ಬೀದಿಯಲ್ಲಿ ಮಸೀದಿ ಹತ್ತಿರಕ್ಕೆ ಬಂದಾಗ ಆ ಭಾಗದಲ್ಲಿ ಲೈಟ್ ಆಫ್ ಮಾಡಲಾಗಿತ್ತು. ಏಕಾಏಕಿ ಮಸೀದಿಯಿಂದ ಕಲ್ಲು ತೂರಾಟ ನಡೆಸಲಾಗಿದೆ. ಅಲ್ಲದೇ ಕೆಲವು ಕಡೆ ದೊಣ್ಣೆಗಳನ್ನು ಎಸೆಯಲಾಗಿದೆ. ಹೀಗಾಗಿ ಮೆರವಣಿಗೆಯಲ್ಲಿದ್ದ ಭಕ್ತರು ಭೀತಿಗೊಳಗಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಸ್ಥಳದ ಪರಿಸ್ಥಿತಿ: ಘಟನೆಯ ನಂತರ ಮದ್ದೂರಿನ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಸ್ಥಳೀಯರು ಮತ್ತು ಭಕ್ತರು ಪ್ರಕರಣಕ್ಕೆ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಮಂದಿ ಸ್ಥಳದಲ್ಲಿ ವೀಕ್ಷಕರಾಗಿ ಇದ್ದವರು, ಮಸೀದಿಯ ಬಳಿಯೇ ಧಾರ್ಮಿಕ ಉಲ್ಲೇಖ ಮತ್ತು ಘೋಷಣೆಗಳನ್ನು ನಿಷೇಧಿಸಲಾಗಿದೆ ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಮೆರವಣಿಗೆ ಸಹಜವಾಗಿ ಮೈಕ್ ಆಫ್ ಮಾಡಿ ನಡೆಯುತ್ತಿತ್ತು. ಆದರೆ ಏಕಾಏಕಿ ನಡೆದ ಲೈಟ್ ಆಫ್ ಮತ್ತು ಕಲ್ಲು ತೂರಾಟ ಪ್ರಕರಣದ ನಂತರ ಸ್ಥಳದಲ್ಲಿ ಗೊಂದಲ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಕ್ರಮ: ಪೊಲೀಸರ ವರದಿ ಪ್ರಕಾರ, ಕಲ್ಲು ತೂರಾಟ ಸಂಬಂಧ 22 ಜನರನ್ನು ಬಂಧಿಸಲಾಗಿದೆ. ಜಿಲ್ಲೆ ಮತ್ತು ನಗರ ಪೊಲೀಸ್ ವಿಭಾಗಗಳು ತ್ವರಿತವಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ತಡೆಯಲು ಕ್ರಮ ಕೈಗೊಂಡಿವೆ.

K.M.Sathish Gowda

Join WhatsApp

Join Now

Facebook

Join Now

Leave a Comment