ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಭದ್ರಾವತಿಯಲ್ಲಿ ಸಾಲದ ಕಿರುಕುಳಕ್ಕೆ ಜೀವ ಬಲಿ,.! 5 ವರ್ಷಗಳ ಬಳಿಕ ಆರೋಪಿತರಿಗೆ 10 ವರ್ಷ ಜೈಲು”

On: April 10, 2026 7:09 PM
Follow Us:

ಕ್ರೈಮ್ ಸುದ್ದಿ | ಭದ್ರಾವತಿ: ಭದ್ರಾವತಿ ನಗರವನ್ನು ಬೆಚ್ಚಿಬೀಳಿಸಿದ್ದ ಸಾಲದ ಕಿರುಕುಳದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಸುಮಾರು ಐದು ವರ್ಷಗಳ ಬಳಿಕ ನ್ಯಾಯ ದೊರೆತಿದೆ. ನ್ಯಾಯಾಲಯವು ಆರೋಪಿತರ ವಿರುದ್ಧ ಗಂಭೀರ ತೀರ್ಪು ನೀಡಿದ್ದು, ಸಮಾಜದಲ್ಲಿ ಸಾಲದ ಒತ್ತಡದ ದುರಂತ ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಮೃತ ರಾಮಚಂದ್ರ ಅವರು ತಮ್ಮ ಮಗಳ ಮದುವೆಗಾಗಿ ಹಲವು ವರ್ಷಗಳ ಹಿಂದೆ ಸಂಬಂಧಿಕರಾದ ಮಹದೇವ (56) ಹಾಗೂ ಯಶೋದ (48), ಬಂಡಾರಹಳ್ಳಿ ಗ್ರಾಮದ ನಿವಾಸಿಗಳಿಂದ ಕೈ ಸಾಲ ಪಡೆದಿದ್ದರು. ಕಾಲಕ್ರಮೇಣ ಅವರು ಸಾಲದ ಹಣವನ್ನು ಹಿಂತಿರುಗಿಸಲು ಮುಂದಾದಾಗ, ಆರೋಪಿತರು ಬಡ್ಡಿ ಸೇರಿಸಿ ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸಿದ್ದರು.

ಆರೋಪಿಗಳಾದ ಮಹದೇವ (56) ಹಾಗೂ ಯಶೋದ (48), ಬಂಡಾರಹಳ್ಳಿ ಗ್ರಾಮದ ನಿವಾಸಿಗಳು

ಹಣವನ್ನು ತಕ್ಷಣ ನೀಡದಿದ್ದರೆ “ಮನೆಯನ್ನು ನಮ್ಮ ಹೆಸರಿಗೆ ಬರೆದುಕೊಡಿ” ಎಂದು ಬೆದರಿಕೆ ಹಾಕಿದ ಆರೋಪಿತರು, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ನಿರಂತರ ಹಿಂಸೆ ಮತ್ತು ಒತ್ತಡವನ್ನು ತಾಳಲಾರದೆ, ರಾಮಚಂದ್ರ ಅವರು 06 ಫೆಬ್ರವರಿ 2021ರಂದು ಭದ್ರಾವತಿಯ ಬಿ.ಹೆಚ್. ರಸ್ತೆಯಲ್ಲಿರುವ ರಘು ಲಾಡ್ಜ್‌ನ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 306 (ಆತ್ಮಹತ್ಯೆಗೆ ಪ್ರೇರಣೆ), 504 (ನಿಂದನೆ), 506 (ಬೆದರಿಕೆ) ಹಾಗೂ 34ರಡಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿ ಪಿಎಸ್ಐ ಈರೇಶ ಅವರು ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ರತ್ನಮ್ಮ ಪಿ. ಅವರು ಪ್ರಬಲವಾದ ವಾದ ಮಂಡಿಸಿದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿತರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿತು.

ಅಂತಿಮವಾಗಿ, ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಏಪ್ರಿಲ್ 9, 2026ರಂದು ತೀರ್ಪು ನೀಡಿದ್ದು, ಎ1 ಮತ್ತು ಎ2 ಆರೋಪಿತರಿಗೆ ತಲಾ 10 ವರ್ಷಗಳ ಕಠಿಣ ಕಾರಾವಾಸ ಹಾಗೂ ಒಟ್ಟು ₹2 ಲಕ್ಷ ದಂಡ ವಿಧಿಸಿದ್ದಾರೆ. ಜೊತೆಗೆ, ದಂಡದ ಮೊತ್ತದಲ್ಲಿ ₹1 ಲಕ್ಷವನ್ನು ಮೃತನ ಪತ್ನಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.

ಸಂದೇಶ ಸ್ಪಷ್ಟ: ಸಾಲದ ಹೆಸರಿನಲ್ಲಿ ಮಾನಸಿಕ ಹಿಂಸೆ ನೀಡುವುದು ಗಂಭೀರ ಅಪರಾಧ. ಇಂತಹ ಕಿರುಕುಳಗಳು ಜೀವಹಾನಿಗೆ ಕಾರಣವಾಗಬಹುದು ಎಂಬುದನ್ನು ಈ ಪ್ರಕರಣ ಮತ್ತೆ ಒತ್ತಿ ಹೇಳುತ್ತದೆ.

K.M.Sathish Gowda

Join WhatsApp

Join Now

Facebook

Join Now

Read more

ನಟ ದುನಿಯಾ ವಿಜಯ್ ಸೇರಿದಂತೆ ಹಲವು ಮಂದಿ ಶೇರ್ ಮಾಡಿದ ಝಾಂಬಿ ಡ್ರಗ್ ಸುಳ್ಳು ವಿಡಿಯೋ ಪ್ರಕರಣ: ವೈರಲ್ ಮಾಡಿದವರ ವಿರುದ್ಧ ಕ್ರಮಕ್ಕೆ ಪೊಲೀಸ್ ಆಯುಕ್ತರ ಎಚ್ಚರಿಕೆ

ಹನುಮಂತಪುರದಲ್ಲಿ ಬೆಚ್ಚಿಬೀಳಿಸಿದ ಘಟನೆ: ಅಡಕೆ ತೋಟದಲ್ಲಿ ಉರಿದುಹೋದ ಜೀವ – ಶಿವಮೊಗ್ಗ ಉಪನ್ಯಾಸಕರ ರಹಸ್ಯ ಸಾವು, ಕೊಲೆ ಶಂಕೆ‌,.!

ಶಿವಮೊಗ್ಗದಲ್ಲಿ ಅಂತರ್ ರಾಜ್ಯ ಸರಗಳ್ಳರ ಗ್ಯಾಂಗ್ ಬಂಧನ – ವಿನೋಬನಗರ ಪೊಲೀಸರಿಂದ ₹25 ಲಕ್ಷ ಚಿನ್ನಾಭರಣ ವಶ

ಧರ್ಮಸ್ಥಳ ಪ್ರಕರಣ: ಬುರುಡೆ ಗ್ಯಾಂಗ್ ವಿರುದ್ಧ ಚಿನ್ನಯ್ಯ ಜೀವ ಬೆದರಿಕೆ ದೂರು

ನಟ ದರ್ಶನ್ ಸೇರಿ 17 ಮಂದಿಗೆ ದೋಷಾರೋಪ ಪ್ರಕಟ: ಪ್ರಕರಣದಲ್ಲಿ ಆರೋಪಿಗಳೆಲ್ಲ “ಸುಳ್ಳು” ಎಂದು ಪ್ರತಿಕ್ರಿಯೆ,‌.!?

ಶಿವಮೊಗ್ಗದಲ್ಲಿ ಮನೆಗಳ್ಳತನ ಪ್ರಕರಣ ಬಯಲು – ಪೊಲೀಸರಿಂದ ರೂ.34 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ ವಶ,.!

Leave a Comment