ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ ಬಿಜೆಪಿ ಕಾರ್ಯಾಲಯದ ಮೇಲೆ ಕಾಂಗ್ರೆಸ್ ಗೂಂಡಾಗಿರಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಖಂಡಿಸಿ ಬಿಜೆಪಿ ಮುಖಂಡರ ಆಕ್ರೋಶ!

On: July 23, 2026 7:21 PM
Follow Us:

ಶಿವಮೊಗ್ಗ: “ಮಲೆನಾಡಿನ ಹೆಬ್ಬಾಗಿಲು, ಶಾಂತಿ-ಸೌಹಾರ್ದತೆಗೆ ಹೆಸರಾದ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಆಡಳಿತಾರೂಢ ಕಾಂಗ್ರೆಸ್‌ನ ಗೂಂಡಾ ಪಡೆ ಅಟ್ಟಹಾಸ ಮೆರೆದಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಶಿವಮೊಗ್ಗದ ಜಿಲ್ಲಾ ಹಾಗೂ ನಗರ ಬಿಜೆಪಿ ಕಾರ್ಯಾಲಯದ ಮೇಲೆ ನಡೆಸಿರುವ ಅನಾಗರಿಕ ಹಾಗೂ ಕಾನೂನುಬಾಹಿರ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ,” ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಜಿತ ಸಂಚು ಹಾಗೂ ಅನಾಗರಿಕ ದೌರ್ಜನ್ಯ

ದಿನಾಂಕ: 23.07.2026 ರ ಬೆಳಿಗ್ಗೆ ಸರಿಯಾಗಿ 11.26 ರ ಸುಮಾರಿಗೆ, ಯಾವುದೇ ರೀತಿಯ ಪೂರ್ವ ಅನುಮತಿಯಾಗಲಿ ಅಥವಾ ಸಾರ್ವಜನಿಕ ಮುನ್ಸೂಚನೆಯಾಗಲಿ ಇಲ್ಲದೆ, ಕಾಂಗ್ರೆಸ್‌ ಕಾರ್ಯಕರ್ತರ ಹೆಸರಿನಲ್ಲಿದ್ದ ಗೂಂಡಾ ಪಡೆ ಏಕಾಏಕಿ ನಮ್ಮ ಪಕ್ಷದ ಕಛೇರಿಗೆ ನುಗ್ಗಿದೆ.
ಪೀಠೋಪಕರಣ ಹಾಗೂ ಆಸ್ತಿ ಧ್ವಂಸ
ಕಾರ್ಯಾಲಯದ ಒಳಗಡೆ ಅಕ್ರಮವಾಗಿ ನುಗ್ಗಿದ ಗೂಂಡಾಗಳು ಕಛೇರಿಯಲ್ಲಿದ್ದ ಪೀಠೋಪಕರಣಗಳನ್ನು, ಖರ್ಚಿಗಳನ್ನು ಮುರಿದು ಹಾಕಿ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದಾರೆ. ಪಕ್ಷದ ಬಂಟಿಂಗ್ಸ್‌ಗಳನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ.
ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ
ಕಾರ್ಯಾಲಯದಲ್ಲಿದ್ದ ಕಾರ್ಯದರ್ಶಿ ಚಿದಾನಂದ ಹಾಗೂ ಯುವಮೋರ್ಚಾ ಅಧ್ಯಕ್ಷರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಬಿದರೆ ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.
ದ್ವಿಚಕ್ರ ವಾಹನಗಳ ಹಾನಿ ಹಾಗೂ ಚಪ್ಪಲಿ ಎಸೆತ
ಕಾರ್ಯಾಲಯದ ಆವರಣದಲ್ಲಿ ಸಾರ್ವಜನಿಕವಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿ, ಕಾರ್ಯಾಲಯದ ಮೇಲೆಯೇ ಚಪ್ಪಲಿಗಳನ್ನು ಎಸೆದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಎಸಗಿದ್ದಾರೆ.

ಪೊಲೀಸ್ ಇಲಾಖೆಯ ವೈಫಲ್ಯವೋ ಅಥವಾ ಶಾಮೀಲಾತಿಯೋ?

ಅಧಿಕಾರಿಗಳ ಸಮ್ಮುಖದಲ್ಲೇ ನಡೆದ ದೌರ್ಜನ್ಯ
“ಈ ಇಡೀ ಕೃತ್ಯ ನಡೆಯುವಾಗ ಸ್ಥಳದಲ್ಲಿ ಡಿ.ವೈ.ಎಸ್.ಪಿ ಗಳು ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್‌ಗಳ ದಂಡೇ ಹಾಜರಿತ್ತು. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಈ ದೌರ್ಜನ್ಯ ನಡೆದಿದೆ ಎಂದರೆ, ಶಿವಮೊಗ್ಗದಲ್ಲಿ ಕಾನೂನು-ಸುವ್ಯವಸ್ಥೆ ಜೀವಂತವಾಗಿದೆಯೇ?” ಎಂದು ಮುಖಂಡರು ಪ್ರಶ್ನಿಸಿದ್ದಾರೆ.
“ಕಾಂಗ್ರೆಸ್ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡು ಪೊಲೀಸ್ ಇಲಾಖೆಯ ವಾಹನದ ಮೇಲೆಯೇ ಏರಿ ನಿಂತು, ಕಾಂಗ್ರೆಸ್ ಭಾವುಟ ಪ್ರದರ್ಶಿಸಿದ್ದಾರೆ. ‘ಪೊಲೀಸರು ನಮ್ಮ ಬೆಂಬಲಕ್ಕೆ ಇದ್ದಾರೆ, ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂಬಂತೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಇದನ್ನು ನೋಡಿದರೆ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆಯೋ ಅಥವಾ ಆಡಳಿತ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆಯೋ ಎಂಬ ಸಂಶಯ ಮೂಡುತ್ತಿದೆ.” ಎಂದು ಆರೋಪಿಸಿದ್ದಾರೆ.

ಡ್ರೋನ್‌ನಲ್ಲಿ ಸೆರೆಯಾಗಿದೆ ‘ಕಾಂಗ್ರೆಸ್ ಅಟ್ಟಹಾಸ’: ಕಣ್ಣೆದುರೇ ಹಲ್ಲೆ ನಡೆದರೂ ಕ್ರಮ ಕೈಗೊಳ್ಳದ ಶಿವಮೊಗ್ಗ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ!

ಸಾಕ್ಷಿ ಆಧಾರ ಇಲಾಖೆಯಲ್ಲೇ ಇದೆ – ತನಿಖೆಗೆ ಹಿಂದೇಟೇಕೆ?
ಪೊಲೀಸ್ ಇಲಾಖೆಯ ಡ್ರೋನ್‌ನಲ್ಲೇ ಜೀವಂತ ಸಾಕ್ಷಿ
ಈ ದುರಂತ ಘಟನೆಯ ಪ್ರತಿಯೊಂದು ಕ್ಷಣವೂ ಪೊಲೀಸ್ ಇಲಾಖೆಯದೇ ಆದ ಡ್ರೋನ್ ಕ್ಯಾಮೆರಾದಲ್ಲಿ (Drone Camera) ಸಂಪೂರ್ಣವಾಗಿ ಸೆರೆಯಾಗಿದೆ. ಯಾರು ಅಕ್ರಮವಾಗಿ ಕಛೇರಿಗೆ ನುಗ್ಗಿದರು, ಯಾರ್ಯಾರು ಮಾರಣಾಂತಿಕ ಹಲ್ಲೆ ನಡೆಸಿದರು ಹಾಗೂ ಯಾರಿಂದ ಆಸ್ತಿ-ಪಾಸ್ತಿ ಹಾನಿಯಾಯಿತು ಎಂಬುದಕ್ಕೆ ಪೊಲೀಸರ ಕಣ್ಣೆದುರೇ ಜೀವಂತ ಸಾಕ್ಷ್ಯಗಳಿವೆ.

ಇಷ್ಟೆಲ್ಲಾ ಸ್ಪಷ್ಟ ಆಧಾರಗಳು ಇಲಾಖೆಯ ಬಳಿಯಲ್ಲೇ ಅಧಿಕೃತವಾಗಿ ಲಭ್ಯವಿದ್ದರೂ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿರುವುದು ಇಡೀ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸುವಂತೆ ಮಾಡಿದೆ.
ಇಲಾಖೆಯ ಮೌನ & ಖಾಕಿ ಪಡೆಯ ನಿಷ್ಕ್ರಿಯತೆ
ಅಷ್ಟೇ ಅಲ್ಲದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಕಛೇರಿಯ ಮೇಲೆ ಚಪ್ಪಲಿ ಎಸೆದದ್ದು, ಪೀಠೋಪಕರಣಗಳನ್ನು ಪುಡಿಪುಡಿ ಮಾಡಿದ್ದು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಎಸಗಿದ್ದನ್ನೆಲ್ಲಾ ಸ್ವತಃ ಪೊಲೀಸ್ ಇಲಾಖೆಯ ಡ್ರೋನ್ ಚಿತ್ರೀಕರಿಸಿದೆ.

ಘಟನೆ ನಡೆದು ಗಂಟೆಗಳು ಕಳೆದರೂ, ವಿಡಿಯೋ ಸಾಕ್ಷ್ಯಗಳನ್ನಿಟ್ಟುಕೊಂಡು ದುಂಡಾವರ್ತನೆ ತೋರಿದವರನ್ನು ಬಂಧಿಸದೆ ಇಲಾಖೆ ಮೌನ ವಹಿಸಿರುವುದು ಖಾಕಿ ಪಡೆಯ ನಿಷ್ಕ್ರಿಯತೆ ಹಾಗೂ ಅಕ್ಷಮ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲಾಖೆಯ ಶರಣಾಗತಿ ಹಾಗೂ ಬೃಹತ್ ಹೋರಾಟದ ಎಚ್ಚರಿಕೆ
ಘಟನಾ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೇ ಉಪಸ್ಥಿತರಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಾಹನದ ಮೇಲೇರಿ ಬಾವುಟ ಪ್ರದರ್ಶಿಸಿ ಭೀತಿ ಹುಟ್ಟಿಸಲು ಅವಕಾಶ ಮಾಡಿಕೊಟ್ಟಿರುವುದು ಇಲಾಖೆಯ ಶರಣಾಗತಿಯನ್ನು ತೋರಿಸುತ್ತದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಇಲಾಖೆಯೇ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದನ್ನು ಬಿಜೆಪಿ ಮುಖಂಡರು ಕಟುವಾಗಿ ಖಂಡಿಸಿದ್ದು, ತಕ್ಷಣವೇ ಡ್ರೋನ್ ದೃಶ್ಯಾವಳಿಗಳನ್ನು ಆಧರಿಸಿ ನೈಜ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸದಿದ್ದರೆ ಇಲಾಖೆಯ ವಿರುದ್ಧವೇ ಬೃಹತ್ ಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.

​ಈ ಕೂಡಲೇ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು (SP) ಮಧ್ಯಪ್ರವೇಶಿಸಿ, ತಮ್ಮದೇ ಇಲಾಖೆಯ ಡ್ರೋನ್ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಬಿಜೆಪಿ ಕಾರ್ಯಾಲಯಕ್ಕೆ ಅಕ್ರಮವಾಗಿ ನುಗ್ಗಿ ಧ್ವಂಸ ಕೃತ್ಯ ಎಸಗಿದ ಹಾಗೂ ನಮ್ಮ ನಾಯಕರ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಗೂಂಡಾಗಳನ್ನು ತಕ್ಷಣವೇ ಬಂಧಿಸಬೇಕು. ಘಟನಾ ಸ್ಥಳದಲ್ಲಿದ್ದು ಗೂಂಡಾಗಳನ್ನು ತಡೆಯದೆ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಅಮಾನತುಗೊಳಿಸಬೇಕು.

ಇಲ್ಲದಿದ್ದರೆ ಜಿಲ್ಲಾದ್ಯಂತ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಶಿವಮೊಗ್ಗ ವಿಭಾಗ ಪ್ರಭಾರಿ ಆ‌ರ್.ಕೆ.ಸಿದ್ದರಾಮಣ್ಣ, ಜಿಲ್ಲಾಧ್ಯಕ್ಷರಾದ ಎನ್.ಕೆ. ಜಗದೀಶ್, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘರಾಜ್ ಹಾಗೂ ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಶಿವರಾಜ್, ಮಾಧ್ಯಮದ ಚಂದ್ರಶೇಖರ್ ಎಸ್, ಮಂಜುನಾಥ್ ಸೇರಿದಂತೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರಿಗೆ ಕಟ್ಟುನಿಟ್ಟಿನ ಕ್ರಮಕ್ಕಾಗಿ ಒತ್ತಾಯಿಸಿ ಮನವಿ ಮಾಡಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಶಾಸಕರ ಮೇಲೆಯೇ ಹಲ್ಲೆಗೆ ಇಳಿದ ‘ಕೊತ್ವಾಲ್ ಶಿಷ್ಯರು’; ​ಕಾಂಗ್ರೆಸ್‌ನದ್ದು ‘ನಾಲಾಯಕ್ ಸರ್ಕಾರ’, ರಾಜ್ಯದಲ್ಲಿ ಗೂಂಡಾ ದರ್ಬಾರ್: ಬಿ.ವೈ. ವಿಜಯೇಂದ್ರ ಆಕ್ರೋಶ!

ಲಕ್ಷಾಂತರ ಸರ್ಕಾರಿ ನೌಕರರ ಹೃದಯದ ಧ್ವನಿ ಸಿ.ಎಸ್. ಷಡಾಕ್ಷರಿ: 46ನೇ ಜನ್ಮದಿನದ ಸಂಭ್ರಮದಲ್ಲಿ ಸೇವೆ, ಸಂಘಟನೆ ಮತ್ತು ಮಾನವೀಯತೆಯ ಸಾರ್ಥಕ ಪಯಣಕ್ಕೆ ಅಭಿನಂದನೆ

ಕಂಠ ಅಮರ, ನೆನಪು ಶಾಶ್ವತ: ನಾದಲೋಕದ ಗಾನಸರಸ್ವತಿ ಎಸ್. ಜಾನಕಮ್ಮನವರಿಗೆ ಶಿವಮೊಗ್ಗದಲ್ಲಿ ಅಪರೂಪದ ಸಂಗೀತ ನಮನ

ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿ ಸಮರ; ಜುಲೈ 25-26ರಂದು ರಾಜ್ಯಾದ್ಯಂತ ಎಸ್‌ಐಆರ್‌ ಮಹಾ ಸಂಪರ್ಕ ಅಭಿಯಾನ: ಬಿ.ವೈ. ವಿಜಯೇಂದ್ರ

ಶಿವಮೊಗ್ಗದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರಿಗೆ ಜೆಡಿಎಸ್ ಕಾರ್ಯಕರ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ

ಶಿವಮೊಗ್ಗದಲ್ಲಿ ಶೇ. 44ರಷ್ಟು ಮಳೆ ಕೊರತೆ; ಜನರ ಮನೆಬಾಗಿಲಿಗೆ ತೆರಳಿ ಬರ ಪರಿಸ್ಥಿತಿ ನಿಭಾಯಿಸಿ: ಕರ್ತವ್ಯಲೋಪಕ್ಕೆ ಕಠಿಣ ಕ್ರಮ – ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

Leave a Comment