ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸುಡುವ ಬೇಸಿಗೆಗೆ ತಂಪೆರೆದ ‘ಜಲಾಮೃತ’: ಮೂಕ ಜೀವಿಗಳ ಒಡಲು ತುಂಬಿಸುತ್ತಿರುವ ‘ಫ್ರೆಂಡ್ಸ್ ಸೆಂಟರ್’

On: May 19, 2026 5:55 PM
Follow Us:

ಶಿವಮೊಗ್ಗ: ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮನುಷ್ಯನೇ ಇರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರೆಕ್ಕೆ ಬಿಚ್ಚಿ ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಹಾಗೂ ರಸ್ತೆಬದಿಯ ಮೂಕ ಪ್ರಾಣಿಗಳ ಸ್ಥಿತಿಯಂತೂ ಹೇಳತೀರದು. ಕುಡಿಯಲು ಹನಿ ನೀರಿಲ್ಲದೆ ತತ್ತರಿಸುತ್ತಿರುವ ಪ್ರಾಣಿ-ಪಕ್ಷಿಗಳ ಜೀವ ಉಳಿಸಲು ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆಯಾದ ‘ಫ್ರೆಂಡ್ಸ್ ಸೆಂಟರ್’ ಅತ್ಯಂತ ಶ್ಲಾಘನೀಯ ಹೆಜ್ಜೆಯೊಂದನ್ನು ಇಟ್ಟಿದೆ. ಬೇಸಿಗೆಯ ಈ ಕಠಿಣ ದಿನಗಳಲ್ಲಿ ಮೂಕ ಜೀವಿಗಳ ದಾಹ ನೀಗಿಸಲು ಸಂಸ್ಥೆಯು ಹಮ್ಮಿಕೊಂಡಿರುವ “ಜಲಾಮೃತ” ಕಾರ್ಯಕ್ರಮವು ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

​ನಗರದ ವಿವಿಧ ಬಡಾವಣೆಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸಲು ಸಿಮೆಂಟಿನ ನೀರಿನ ತೊಟ್ಟಿಗಳನ್ನು ವಿತರಿಸುವ ಮೂಲಕ ಫ್ರೆಂಡ್ಸ್ ಸೆಂಟರ್ ಮಾನವೀಯತೆಯ ದಾರಿದೀಪವಾಗಿದೆ.

​ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಫ್ರೆಂಡ್ಸ್ ಸೆಂಟರ್ ಅಧ್ಯಕ್ಷರಾದ ಬಿ. ಜಿ. ಧನರಾಜ್ ಅವರು ಪ್ರಕೃತಿ ಮತ್ತು ಜೀವಸಂಕುಲದ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು

​”ಪಕ್ಷಿಗಳು ಕೇವಲ ಹಾರಾಡುವ ಜೀವಿಗಳಲ್ಲ; ಅವು ಪ್ರಕೃತಿಯ ನಿಜವಾದ ತೋಟಗಾರರು. ಪಕ್ಷಿಗಳು ತಿಂದ ಹಣ್ಣಿನ ಬೀಜಗಳು ಅವುಗಳು ಹಾರಾಡುವಲ್ಲೆಲ್ಲಾ ಹರಡಿ, ವೃಕ್ಷಗಳಾಗಿ ಬೆಳೆಯುತ್ತವೆ. ಕಾಡುಗಳು ಸಮೃದ್ಧವಾಗಿ ಬೆಳೆಯಲು ಮತ್ತು ಸಕಾಲದಲ್ಲಿ ಮಳೆಯಾಗಲು ಈ ಪಕ್ಷಿಗಳ ಪಾತ್ರ ಅನನ್ಯವಾಗಿದೆ. ಹೀಗೆ ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಕೊಂಡಿಯಾಗಿರುವ ಪಕ್ಷಿಗಳು ಇಂದು ಸುಡುವ ಬಿಸಿಲಿಗೆ ನೀರಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಅವುಗಳ ಜೀವ ಕಾಪಾಡುವುದು ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯವಾಗಿದೆ.” ಎಂದರು.

​ತೊಟ್ಟಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರಿಸರ ಪ್ರೇಮಿ ಜನಮೇಜಯ ಅವರು ಫ್ರೆಂಡ್ಸ್ ಸೆಂಟರ್ ಸದಸ್ಯರ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

​”ಪ್ರಾಣಿ-ಪಕ್ಷಿಗಳಿಗಾಗಿ ಸಿಮೆಂಟ್ ತೊಟ್ಟಿಗಳನ್ನು ವಿತರಿಸಿ ನೀರುಣಿಸುವ ಈ ಪುಣ್ಯದ ಕೆಲಸ ನಿಜಕ್ಕೂ ಎಲ್ಲರಿಗೂ ಪ್ರೇರಣಾದಾಯಕ. ಫ್ರೆಂಡ್ಸ್ ಸೆಂಟರ್ ಸದಾ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲೂ ಇವರ ಸೇವೆ ನಿರಂತರವಾಗಿರಲಿ” ಎಂದು ಆಶಿಸಿದರು.

​ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕರೆ ನೀಡಿದ ಅವರು, “ಪ್ರತಿಯೊಬ್ಬರೂ ತಮ್ಮ ಮನೆಯ ಮಹಡಿಗಳ ಮೇಲೆ, ಕಿಟಕಿಗಳ ಹೊರಗಡೆ ತಟ್ಟೆ, ಪಾತ್ರೆ ಅಥವಾ ಡಬ್ಬಿಗಳಲ್ಲಿ ನೀರನ್ನು ತುಂಬಿಸಿಟ್ಟು ಮೂಕ ಜೀವಿಗಳ ದಾಹ ನೀಗಿಸಲು ಕೈಜೋಡಿಸಬೇಕು” ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೇತ್ರ ಭಂಡಾರದ ಅಧ್ಯಕ್ಷರಾದ ವಿ. ನಾಗರಾಜ್ ಅವರು ಪರಿಸರ ವಿನಾಶದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. “ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ಗುಬ್ಬಿ ಹಾಗೂ ಇನ್ನು ಅನೇಕ ಪ್ರಾಣಿ-ಪಕ್ಷಿಗಳು ಇಂದು ನಾಶದ ಅಂಚಿಗೆ ತಲುಪಿವೆ. ನಾವು ಹೀಗೆಯೇ ಅಲಕ್ಷ್ಯ ವಹಿಸಿದರೆ, ಮುಂದಿನ ಪೀಳಿಗೆಗೆ ಪ್ರಾಣಿ-ಪಕ್ಷಿಗಳನ್ನು ಕೇವಲ ಭಾವಚಿತ್ರಗಳ ಮೂಲಕವೇ ತೋರಿಸಬೇಕಾದ ದುಸ್ಥಿತಿ ಬರಬಹುದು” ಎಂದು ಎಚ್ಚರಿಸಿದರು.

​ಅರಣ್ಯ ನಾಶದ ದುಷ್ಪರಿಣಾಮಗಳ ಕುರಿತು ಮಾತನಾಡಿದ ಮಾಜಿ ಅಧ್ಯಕ್ಷರಾದ ಜಿ. ವಿಜಯಕುಮಾರ್, “ಇತ್ತೀಚಿನ ದಿನಗಳಲ್ಲಿ ಅರಣ್ಯ ಸಂಪತ್ತು ಕ್ಷೀಣಿಸುತ್ತಿರುವ ಕಾರಣ ಪ್ರಾಣಿ-ಪಕ್ಷಿಗಳಿಗೆ ಕಾಡಿನಲ್ಲಿ ಆಸರೆ ಇಲ್ಲದಂತಾಗಿದೆ. ಹೀಗಾಗಿ ಅವು ಕಾಡಿನಿಂದ ನಾಡಿನ ಕಡೆಗೆ ಮುಖ ಮಾಡುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ಕೇವಲ ಭಾಷಣಕ್ಕೆ ಸೀಮಿತವಾಗದೆ, ಫ್ರೆಂಡ್ಸ್ ಸೆಂಟರ್ ಸದಸ್ಯರೆಲ್ಲರೂ ಒಟ್ಟಾಗಿ ನಗರದಾದ್ಯಂತ ಸಂಚರಿಸಿ ಕರಸೇವೆ ಮಾಡಿದರು. ನಗರದ ಪ್ರಮುಖ ಸ್ಥಳಗಳಾದ:

  • ​ಗೋಪಾಲದ ಕೃಷ್ಣ ಮಠ ಪಾರ್ಕ್
  • ​ಸ್ವಾಮಿ ವಿವೇಕಾನಂದ ಪಾರ್ಕ್
  • ​ಕಮರ್ಷಿಯಲ್ ಟ್ಯಾಕ್ಸ್ ಆಫೀಸ್ ಆವರಣ
  • ​ಅಶ್ವತ್ಥನಗರ ಪಾರ್ಕ್
  • ​ರಾಜೇಂದ್ರ ನಗರ, ಬಸವನಗುಡಿ
  • ​ತಿಲಕ್ ನಗರ ಮತ್ತು ಗಾರ್ಡನ್ ಏರಿಯಾ

​ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ, ತೊಟ್ಟಿಗಳನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡುವ ಸಾರ್ವಜನಿಕರ ಮನೆಗಳ ಮುಂದೆ ಸಿಮೆಂಟ್ ತೊಟ್ಟಿಗಳನ್ನು ಯಶಸ್ವಿಯಾಗಿ ವಿತರಿಸಲಾಯಿತು.

​ಮೂಕ ಜೀವಿಗಳ ಹಿತ ರಕ್ಷಿಸುವ ಈ ಸತ್ಕಾರ್ಯದ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಯು. ಆರ್. ಐತಾಳ್, ಮಹಿಳಾ ಅಧ್ಯಕ್ಷೆ ಸಪ್ನಾ ಬದ್ರಿನಾಥ್, ನೇತ್ರ ಭಂಡಾರದ ಅಧ್ಯಕ್ಷರಾದ ವಿ. ನಾಗರಾಜ್, ಜಿ. ವಿಜಯಕುಮಾರ್, ಆರ್. ಮನೋಹರ್, ಪಿ. ರಾಜೇಶ್, ಎಂ. ಪಿ.  ನಾಗರಾಜ್, ಮಲ್ಲಿಕಾರ್ಜುನ್ ಕಾನೂರು, ಹೆಚ್. ಎಂ. ಸತ್ಯನಾರಾಯಣ್, ಪಿ. ಹಿರೇಮಠ್, ಗಂಗಾಧರ್, ಸತೀಶ್ ಸೇರಿದಂತೆ ಸಂಸ್ಥೆಯ ಅನೇಕ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

​ಫ್ರೆಂಡ್ಸ್ ಸೆಂಟರ್‌ನ ಈ ‘ಜಲಾಮೃತ’ ಯೋಜನೆ ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಪ್ರಕೃತಿಯ ಮೇಲಿನ ಅಪ್ರತಿಮ ಪ್ರೀತಿಯ ಸಂಕೇತವಾಗಿದೆ. ಇಂತಹ ಸಂಸ್ಥೆಯ ನಡೆ ಇಡೀ ಸಮಾಜಕ್ಕೆ ಮಾದರಿಯಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

ರಸ್ತೆ ಗುಂಡಿ ಮುಚ್ಚದ, ರೈತರ ಕಣ್ಣೀರು ಒರೆಸದ ಸರ್ಕಾರಕ್ಕೆ ‘ಸಾಧನೆ’ಯ ಹೆಸರೆತ್ತುವ ನೈತಿಕತೆ ಎಲ್ಲಿದೆ? – ಬಿ.ವೈ.ವಿಜಯೇಂದ್ರ ವಾಗ್ದಾಳಿ

ಶಿವಮೊಗ್ಗ ಹೈಕೋರ್ಟ್ ಸಂಚಾರಿ ಪೀಠ ಹೋರಾಟಕ್ಕೆ ಸಿಕ್ಕಿತು ‘ರೈತ ಶಕ್ತಿ’: ವಕೀಲರ ಬೆಂಬಲಕ್ಕೆ ನಿಂತ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

ಬುಳ್ಳಾಪುರ, ಬೇಡರಹೊಸಹಳ್ಳಿಯಲ್ಲಿ ನೆಲಕಚ್ಚಿದ ನೂರಾರು ಎಕರೆ ಅಡಿಕೆ ತೋಟಗಳು: ನೊಂದ ರೈತರಿಗೆ ತಕ್ಷಣ ವಿಶೇಷ ಪರಿಹಾರ ನೀಡಬೇಕು — ದಿನೇಶ್ ಬುಳ್ಳಾಪುರ ಆಗ್ರಹ

​ಪಂಚಪೀಠಾಧೀಶ್ವರರ ಆಶೀರ್ವಾದದೊಂದಿಗೆ ರಾಜ್ಯ ಪ್ರವಾಸ: ಸ್ವಚ್ಛ, ಪ್ರಾಮಾಣಿಕ ಸರ್ಕಾರ ತರುವುದೇ ನನ್ನ ಗುರಿ- ಬಿ.ಎಸ್. ಯಡಿಯೂರಪ್ಪ ಶಪಥ

ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ; ಕಾಯಕ-ದಾಸೋಹ ತತ್ವವೇ ಸಹಕಾರಕ್ಕೆ ಬುನಾದಿ – ಡಾ. ಧನಂಜಯ್ ಸರ್ಜಿ

ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಮಲೆನಾಡ ಹೆಬ್ಬಾಗಿಲು!: ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಅಲಂಕಾರ ಸಮಿತಿಯ ಯುವ ಪಡೆ ಭರ್ಜರಿ ಸಿದ್ಧತೆ

Leave a Comment