ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಆಡಳಿತದೊಂದಿಗೆ ಕೈಜೋಡಿಸಿ ಕಲುಷಿತ ತುಂಗಭದ್ರೆಯನ್ನು ನಿರ್ಮಲಗೊಳಿಸೋಣ: ನ್ಯಾ.ಮೂ. ಸಂತೋಷ್ ಎಂ.ಎಸ್.

On: March 2, 2026 12:54 PM
Follow Us:

ಶಿವಮೊಗ್ಗ: ಕೆಲವರ ದುರಾಸೆ, ಅಜಾಗರೂಕತೆ ಹಾಗೂ ಬೇಜವಾಬ್ದಾರಿತನದಿಂದಾಗಿ ತುಂಗಭದ್ರಾ ನದಿ ಇಂದು ಕಲುಷಿತಗೊಂಡಿದ್ದು, ಈ ಪವಿತ್ರ ನದಿಯನ್ನು ಉಳಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲೂ ಇದೆ ಎಂದು ಗೌರವಾನ್ವಿತ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮೂ. ಸಂತೋಷ್ ಎಂ.ಎಸ್. ಹೇಳಿದರು.

ನಗರದ ಓಪನ್ ಮೈಂಡ್ಸ್ ವರ್ಲ್ಡ್ ನಲ್ಲಿ ಶನಿವಾರ ನಡೆದ “ನಿರ್ಮಲ ತುಂಗಭದ್ರಾ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ, ನದಿ ನೀರು ಸಂಪೂರ್ಣವಾಗಿ ಕಲುಷಿತವಾಗಿ ಬಳಕೆ ಯೋಗ್ಯವಲ್ಲದ ಸ್ಥಿತಿ ಬರುವ ಮೊದಲು ನಾವು ಜಾಗೃತರಾಗಬೇಕು. ಜೀವಜಲವಾದ ಈ ಅಮೃತವನ್ನು ರಕ್ಷಿಸುವುದು ನಮ್ಮ ನೈತಿಕ ಹೊಣೆಗಾರಿಕೆ” ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದೆ, ಅಧಿಕಾರಿಗಳನ್ನು ಟೀಕಿಸದೆ, ಮಾಲಿನ್ಯದ ಮೂಲ ಕಾರಣಗಳ ಕುರಿತು ಸೂಕ್ತ ಮಾಹಿತಿಯನ್ನು ಒದಗಿಸಿ ಅವರ ಸಹಕಾರ ಪಡೆದು ನದಿಯನ್ನು ನಿರ್ಮಲಗೊಳಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಅಧಿಕಾರಿಗಳಿಗೆ ಯೋಗದಿಂದ ಸ್ಥಾನ ದೊರಕುತ್ತದೆ; ಆದರೆ ಆ ಸ್ಥಾನಕ್ಕೆ ತಕ್ಕ ಯೋಗ್ಯತೆ, ಬದ್ಧತೆ ಮತ್ತು ಕರ್ತವ್ಯನಿಷ್ಠೆ ಇರಬೇಕು. ಅರಣ್ಯ ಇಲಾಖೆಯ ಕಾನೂನುಬದ್ಧ ಕ್ರಮಗಳಿಗೆ ನ್ಯಾಯಾಲಯ ಸದಾ ಬೆಂಬಲ ನೀಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ನಿರ್ಮಲ ತುಂಗಭದ್ರಾ ಕಾರ್ಯಾಗಾರದಲ್ಲಿ ನದಿ ಪಾತ್ರದ ಕಾರ್ಯಕರ್ತರು ಜನಜಾಗೃತಿ ಮತ್ತು ಜಲಜಾಗೃತಿಯ ಮೂಲಕ ನದಿ ಮಾಲಿನ್ಯ ತಡೆಗಟ್ಟುವ ಕಾರ್ಯದಲ್ಲಿ ಸರ್ಕಾರದ ಸಹಕಾರ ಪಡೆದು ಸೂಕ್ತ ಆದೇಶಗಳನ್ನು ಹೊರಡಿಸುವಲ್ಲಿ ಯಶಸ್ವಿಯಾಗಲಿ. ಅಗತ್ಯವಿದ್ದಲ್ಲಿ ನ್ಯಾಯಾಲಯವೂ ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನರಗುಂದ ಗುಡ್ಡದ ಹಿರೇಮಠದ ಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, “ಜಲ ಸಂರಕ್ಷಣೆಯಂತಹ ಅಭಿಯಾನಗಳಲ್ಲಿ ಸಮಾಜದ ಪ್ರತಿಯೊಬ್ಬರೂ ಒಂದಾಗಿ ಕೆಲಸ ಮಾಡಬೇಕು. ಈ ಹಿಂದೆ ಆಯೋಜಿಸಿದ್ದ ಜಲಜಾಗೃತಿ–ಜನಜಾಗೃತಿ ಪಾದಯಾತ್ರೆ ನಿರೀಕ್ಷಿತ ಯಶಸ್ಸು ಕಂಡಿದೆ. ಕಲುಷಿತಗೊಂಡ ತುಂಗಭದ್ರೆಯನ್ನು ಎಲ್ಲೆಡೆ ನಿರ್ಮಲಗೊಳಿಸಲು ಇಂತಹ ಕಾರ್ಯಾಗಾರಗಳು ಅವಶ್ಯಕ,” ಎಂದು ಹೇಳಿದರು. ನಾವು ಸದಾ ಈ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಅವರು ಭರವಸೆ ನೀಡಿದರು.

ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ಸಭಾಧ್ಯಕ್ಷತೆ ವಹಿಸಿದ್ದರು. ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಎಂ. ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿಯಾನದ ಉದ್ದೇಶ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಪಾಟೀಲ್ ವೀರಾಪುರ, ಡಾ. ಶ್ರೀಪತಿ ಎಲ್.ಕೆ., ಗಿರೀಶ್ ಪಟೇಲ್, ಕಿರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತುಂಗಭದ್ರಾ ನದಿ ಪಾತ್ರ ಪ್ರದೇಶದಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿ ನದಿ ಸಂರಕ್ಷಣೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ತುಂಗಭದ್ರೆಯನ್ನು ನಿರ್ಮಲಗೊಳಿಸುವ ಸಂಕಲ್ಪ ಈ ಕಾರ್ಯಾಗಾರದಲ್ಲಿ ಘೋಷಿತಗೊಂಡಿದ್ದು, ಪರಿಸರ ಸಂರಕ್ಷಣೆಯ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ವಿಶೇಷ: ಸೊರಬದ ವಿದ್ಯಾರ್ಥಿಗಳಿಗೆ ವಿಮಾನಯಾನ – ಶಿಕ್ಷಣಕ್ಕೆ ಪ್ರೋತ್ಸಾಹದ ಹೊಸ ಅಧ್ಯಾಯ

ದುಬೈನಲ್ಲಿ ಶಿವಮೊಗ್ಗದ ಪ್ರತಿಭೆಗೆ ಅಂತರರಾಷ್ಟ್ರೀಯ ಗೌರವ: ಪ್ರದೀಪ್ ವಿ. ಎಲಿ ಅವರಿಗೆ ‘ವಿಜಯರತ್ನ 2026’ ಪ್ರಶಸ್ತಿ

ಯಲಹಂಕದಲ್ಲಿ ಹಿಂದುಳಿದ–ದಲಿತ ಸಮುದಾಯಗಳ 24 ಮಠಗಳಿಗೆ ಭೂಮಿ ಹಂಚಿಕೆ: ಸಾಮಾಜಿಕ ಸಮಾನತೆಗೆ ಶಾಸಕ ಎಸ್.ಆರ್. ವಿಶ್ವನಾಥ್ ಮಹತ್ವದ ಹೆಜ್ಜೆ

ಕೊಲ್ಲಿ ದೇಶಗಳಲ್ಲಿ ಕನ್ನಡಿಗರ ಸಂಕಷ್ಟ; ಸರ್ಕಾರ ಮಧ್ಯಪ್ರವೇಶಿಸಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯ

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ 5K–10K ಮ್ಯಾರಥಾನ್: ಆರೋಗ್ಯ, ನಶಾಮುಕ್ತಿ ಮತ್ತು ಸೈಬರ್ ಜಾಗೃತಿಗೆ ಒಗ್ಗಟ್ಟಿನ ಹೆಜ್ಜೆ

ಸಿಎಂ ಸಿದ್ದರಾಮಯ್ಯ 17ನೇ ಬಜೆಟ್ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ವಿಶೇಷ ಪೂಜೆ, ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಮಡ್ಲಕ್ಕಿ ಸಮರ್ಪಣೆ

Leave a Comment