ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

🌸 ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ 🌸

On: February 23, 2026 10:40 PM
Follow Us:


ಸಿಹಿಮೊಗ್ಗೆಯ ಊರಲ್ಲಿ
ನೆಲೆ ನಿಂತೆ ನೀ ಕೋಟೆಯಲ್ಲಿ,
ಮಲೆನಾಡ ಹೆಬ್ಬಾಗಿಲಾಗಿ
ಊರ ಜನಕೆ ಕಾವಲಾಗಿ…

ಎರಡು ವರುಷಕ್ಕೊಮ್ಮೆ ನಿನ್ನ ಜಾತ್ರೆ,
ಸಂಭ್ರಮದ ನಿನ್ನ ಯಾತ್ರೆ,
ಲಕ್ಷೋಪಲಕ್ಷ ಭಕ್ತರ
ಕಾಪಾಡುವ ತಾಯಿ ನೀ…


ಮಾಯೆಯ ಮಾಯಾ ಲೋಕದ
ಮಾಯಾವಿ ದೇವಿ ನೀ,
ಇತಿಹಾಸ ಕೆದಕಿದಾಗ
ಮಹಾ ಮಹಿಮೆಯ ತಾಯಿ ನೀ…

ಮನೆ ಮಂದಿ ಮಕ್ಕಳಿಗೆಲ್ಲ
ಆರೋಗ್ಯ ದಾಯಿ ನೀ,
ಊರ ಜನಕೆ ಕ್ಷೇಮದಾತೆ
ವರ ಕೊಡುವೆ ನೀ…


ರೋಗ ರುಜು ಕಳೆಯುವ
ಸೌಖ್ಯದಾತೆ ನೀ,
ರಾಗದ ಆಲಾಪನೆಗೆ
ಒಲಿವ ದೇವಿ ನೀ…

ಊರ ತುಂಬ ಅಲಂಕಾರ
ವಿಜೃಂಭಿಸುವೆ ನೀ,
ದೀಪಾಲಂಕಾರ ಮೆರವಣಿಗೆ
ಝೇಂಕರಿಸುವೆ ನೀ…


ತಪ್ಪು-ಒಪ್ಪು ಏನೇ ಇರಲಿ
ಮನ್ನಿಸಿ ನಡೆಸು ನೀ,
ನಿನ್ನ ಕರುಣೆ ಕಾಣಬೇಕು
ಕನಿಕರಿಸು ದೇವಿ ನೀ…

ವರುಷಕ್ಕೊಮ್ಮೆ ಬಂದು
ಭಕ್ತರನ್ನು ಹರಸುವೆ ನೀ,
ಮತ್ತೆ ಆಶೀರ್ವದಿಸಲು
ಬರುವ ಕಾಲೇಶ್ವರಿ ನೀ…


ನೆಂಟರಿಷ್ಟರು ಬಂಧುಗಳಿಗೆ
ಆಶೀರ್ವದಿಸು ನೀ,
ಹಸಿಗೂಸು ಮಕ್ಕಳಿಗೆಲ್ಲ
ಅಭಯ ನೀಡು ನೀ…

ಭಯ-ಭಕ್ತಿ-ಶ್ರದ್ಧೆ ತುಂಬಿ
ಬಾಳು ಬೆಳಗು ನೀ,
ಮೌಢ್ಯತೆಯ ಮಾರಿಯನ್ನು
ತೊರೆದು ಬರಮಾಡು ನೀ…


ಶ್ರೀ ಸಂತೋಷ್ ಬಿದರಗಡ್ಡೆ
ಶಿಕ್ಷಕ · ಸಾಹಿತಿ

✨ ಜಾತ್ರೆಯ ಪವಿತ್ರ ಸಂದರ್ಭದಲ್ಲಿ ಈ ಭಕ್ತಿ ಗೀತೆ ತಾಯಿಯ ಕೃಪೆಗೆ ಸಮರ್ಪಣೆ ✨

K.M.Sathish Gowda

Join WhatsApp

Join Now

Facebook

Join Now

Read more

ಆಧ್ಯಾತ್ಮಿಕ ಸಂಪತ್ತೇ ಅಮರ; ಭೌತಿಕ ಸಂಪತ್ತು ಶಾಶ್ವತವಲ್ಲ: ಶ್ರೀ ರಂಭಾಪುರಿ ಜಗದ್ಗುರುಗಳು

​ಮೌಲ್ಯಗಳು ಅಂತ್ಯವಾದರೆ ಮಾನವೀಯತೆಯೇ ಅಂತ್ಯಗೊಂಡಂತೆ: ಶ್ರೀ ರಂಭಾಪುರಿ ಜಗದ್ಗುರುಗಳು

ಶಿವಶರಣರ ಪುಣ್ಯಭೂಮಿಯಲ್ಲಿ ಸಂಘರ್ಷ ಬೇಡ; ವಾದ-ವಿವಾದ ಬಿಟ್ಟು ಧರ್ಮ ಸಂಸ್ಕೃತಿ ಗಟ್ಟಿಗೊಳಿಸಿ: ಶ್ರೀ ರಂಭಾಪುರಿ ಜಗದ್ಗುರುಗಳು

​ಭೌತಿಕ ಸಂಪತ್ತಿನಿಂದ ಶಾಂತಿ ಸಿಗದು; ಸತ್ಕರ್ಮದ ಧರ್ಮಾಚರಣೆಯೇ ಬದುಕಿಗೆ ಆಶಾಕಿರಣ: ಶ್ರೀ ರಂಭಾಪುರಿ ಜಗದ್ಗುರುಗಳು

ಬದುಕಿಗೆ ಭಯವಲ್ಲ, ಭರವಸೆ ಮುಖ್ಯ: ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು

ಭಕ್ತಿ, ಧರ್ಮ ಮತ್ತು ಸಂಸ್ಕೃತಿಯ ಮಹಾಸಂಗಮಕ್ಕೆ ಸಾಕ್ಷಿಯಾದ ಸೂಗೂರು: “ದೇವಸ್ಥಾನಗಳು ಕೇವಲ ಕಲ್ಲಿನ ಕಟ್ಟಡಗಳಲ್ಲ, ಸಮಾಜಕ್ಕೆ ಸಂಸ್ಕಾರ ಕಲಿಸುವ ವಿಶ್ವವಿದ್ಯಾಲಯಗಳು”: ಆಯನೂರು ಮಂಜುನಾಥ್

Leave a Comment