ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

🌸 ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ 🌸

On: February 23, 2026 10:40 PM
Follow Us:


ಸಿಹಿಮೊಗ್ಗೆಯ ಊರಲ್ಲಿ
ನೆಲೆ ನಿಂತೆ ನೀ ಕೋಟೆಯಲ್ಲಿ,
ಮಲೆನಾಡ ಹೆಬ್ಬಾಗಿಲಾಗಿ
ಊರ ಜನಕೆ ಕಾವಲಾಗಿ…

ಎರಡು ವರುಷಕ್ಕೊಮ್ಮೆ ನಿನ್ನ ಜಾತ್ರೆ,
ಸಂಭ್ರಮದ ನಿನ್ನ ಯಾತ್ರೆ,
ಲಕ್ಷೋಪಲಕ್ಷ ಭಕ್ತರ
ಕಾಪಾಡುವ ತಾಯಿ ನೀ…


ಮಾಯೆಯ ಮಾಯಾ ಲೋಕದ
ಮಾಯಾವಿ ದೇವಿ ನೀ,
ಇತಿಹಾಸ ಕೆದಕಿದಾಗ
ಮಹಾ ಮಹಿಮೆಯ ತಾಯಿ ನೀ…

ಮನೆ ಮಂದಿ ಮಕ್ಕಳಿಗೆಲ್ಲ
ಆರೋಗ್ಯ ದಾಯಿ ನೀ,
ಊರ ಜನಕೆ ಕ್ಷೇಮದಾತೆ
ವರ ಕೊಡುವೆ ನೀ…


ರೋಗ ರುಜು ಕಳೆಯುವ
ಸೌಖ್ಯದಾತೆ ನೀ,
ರಾಗದ ಆಲಾಪನೆಗೆ
ಒಲಿವ ದೇವಿ ನೀ…

ಊರ ತುಂಬ ಅಲಂಕಾರ
ವಿಜೃಂಭಿಸುವೆ ನೀ,
ದೀಪಾಲಂಕಾರ ಮೆರವಣಿಗೆ
ಝೇಂಕರಿಸುವೆ ನೀ…


ತಪ್ಪು-ಒಪ್ಪು ಏನೇ ಇರಲಿ
ಮನ್ನಿಸಿ ನಡೆಸು ನೀ,
ನಿನ್ನ ಕರುಣೆ ಕಾಣಬೇಕು
ಕನಿಕರಿಸು ದೇವಿ ನೀ…

ವರುಷಕ್ಕೊಮ್ಮೆ ಬಂದು
ಭಕ್ತರನ್ನು ಹರಸುವೆ ನೀ,
ಮತ್ತೆ ಆಶೀರ್ವದಿಸಲು
ಬರುವ ಕಾಲೇಶ್ವರಿ ನೀ…


ನೆಂಟರಿಷ್ಟರು ಬಂಧುಗಳಿಗೆ
ಆಶೀರ್ವದಿಸು ನೀ,
ಹಸಿಗೂಸು ಮಕ್ಕಳಿಗೆಲ್ಲ
ಅಭಯ ನೀಡು ನೀ…

ಭಯ-ಭಕ್ತಿ-ಶ್ರದ್ಧೆ ತುಂಬಿ
ಬಾಳು ಬೆಳಗು ನೀ,
ಮೌಢ್ಯತೆಯ ಮಾರಿಯನ್ನು
ತೊರೆದು ಬರಮಾಡು ನೀ…


ಶ್ರೀ ಸಂತೋಷ್ ಬಿದರಗಡ್ಡೆ
ಶಿಕ್ಷಕ · ಸಾಹಿತಿ

✨ ಜಾತ್ರೆಯ ಪವಿತ್ರ ಸಂದರ್ಭದಲ್ಲಿ ಈ ಭಕ್ತಿ ಗೀತೆ ತಾಯಿಯ ಕೃಪೆಗೆ ಸಮರ್ಪಣೆ ✨

K.M.Sathish Gowda

Join WhatsApp

Join Now

Facebook

Join Now

Read more

ತಾಯಿ ಎಂಬುದು ಕೇವಲ ಒಂದು ಪದವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಕರ್ತವ್ಯದ ಪ್ರತಿರೂಪ: ಶ್ರೀ ಶಾಂತವೀರ ಮಹಾಸ್ವಾಮೀಜಿ

ಶಿವಮೊಗ್ಗದಲ್ಲಿ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವದ ಸಂಭ್ರಮ: ಅಲ್ಲಮಪ್ರಭು ಮೈದಾನದಲ್ಲಿ ಭೂಮಿ ಪೂಜೆ

ಪುರಲೆ ಗ್ರಾಮದಲ್ಲಿ ಪೂರ್ವಭಾವಿ ಸಭೆ: ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಸಿದ್ಧತೆ

ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಬಿಎಸ್‌ವೈ ಅಭಿನಂದನಾ ಸಮಾರಂಭ: ಶಿವಮೊಗ್ಗ ಕಾರ್ಯಕ್ರಮಕ್ಕೆ ಭದ್ರಾವತಿಯಲ್ಲಿ ಸಿದ್ಧತಾ ಸಭೆ

ಶಿವಮೊಗ್ಗ: ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಭರದ ಸಿದ್ಧತೆ; “ಉತ್ಸವವನ್ನು ಐತಿಹಾಸಿಕವಾಗಿಸಿ” ಎಂದು ಆಯನೂರು ಮಂಜುನಾಥ್ ಕರೆ

ಶಿವಮೊಗ್ಗದಲ್ಲಿ ಪಶುಪತಿನಾಥ ಪಂಚಮುಖಿ ದೇಗುಲ ಲೋಕಾರ್ಪಣೆ: ಬದುಕು ಸಮೃದ್ಧಿಯಾಗಲು ದೇವರ ಕರುಣೆಯ ಕಿರಣ ಅಗತ್ಯ- ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment