ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹಸೆಮಣೆ ಏರಬೇಕಿದ್ದ ಯುವತಿ ರಸ್ತೆ ಅಪಘಾತದಲ್ಲಿ ದುರ್ಮರಣ

On: September 8, 2025 6:01 PM
Follow Us:

ಶಿವಮೊಗ್ಗ, ಸೆಪ್ಟೆಂಬರ್ 08: ಇನ್ನೇನು 15 ದಿನಗಳಲ್ಲಿ ಹಸೆಮಣೆ ಏರಿ ಹೊಸ ಜೀವನ ಆರಂಭಿಸಬೇಕಿದ್ದ ಯುವತಿಯೊಬ್ಬಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗದಲ್ಲಿ ಆಘಾತ ಮೂಡಿಸಿದೆ.

ಮಲವಗೊಪ್ಪದ ಬಳಿಯ ಸಕ್ಕರೆ ಫ್ಯಾಕ್ಟರಿ–ಹಾಥಿನಗರ ರಸ್ತೆ ಮಧ್ಯೆ ಇಂದು ಬೆಳಿಗ್ಗೆ 9.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ದುಮ್ಮಳ್ಳಿಯಿಂದ ಶಿವಮೊಗ್ಗಕ್ಕೆ ಸಹೋದರ ಸಂತೋಷ್ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ಕವಿತಾ (26), ಎದುರಿನಿಂದ ಬಂದ ಬೋಟಿ ಮಾರಾಟಗಾರನ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬಿದ್ದುಹೋಗಿದೆ. ಸಂತೋಷ್ ಫುಟ್‌ಪಾತ್ ಕಡೆ ಬಿದ್ದರೆ, ಕವಿತಾ ರಸ್ತೆ ಮಧ್ಯೆ ಬಿದ್ದಳು.

ಅಷ್ಟರಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಖಾಸಗಿ ಬಸ್ ಕವಿತಾಳ ಮೇಲೆ ಹರಿದುಕೊಂಡು ಹೋಗಿದ್ದು, ಆಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಳು. ನಿಶ್ಚಿತಾರ್ಥ ಮುಗಿಸಿ ಮದುವೆ ಸಡಗರಕ್ಕೆ ಸಿದ್ಧವಾಗಿದ್ದ ಯುವತಿಯ ಜೀವ ಕಣ್ಣೆದುರೇ ಹಾರಿ ಹೋಗಿರುವುದು ಕುಟುಂಬ ಹಾಗೂ ಬಂಧುಬಳಗವನ್ನು ಕಂಗಾಲುಮಾಡಿದೆ.

ಸಂಜೆಯ ಹೊತ್ತಿಗೆ ಸಂಭ್ರಮಕ್ಕಾಗಿ ಸಿಂಗರಿಸಬೇಕಿದ್ದ ಮನೆಯಲ್ಲಿ ಈಗ ಅಳಲು ಮತ್ತು ಕಣ್ಣೀರು ಮಾತ್ರ. ಹಸೆಮಣೆ ಏರಬೇಕಿದ್ದ ವಧು ಮಸಣ ಕಡೆಗಿನ ದುಃಖದ ವಿಚಾರ ಹೃದಯ ಕಲುಕುವಂತಾಗಿದೆ.

ಘಟನೆಯ ನಂತರ ಬೋಟಿ ಮಾರಾಟ ಮಾಡುತ್ತಿದ್ದ ದ್ವಿಚಕ್ರ ವಾಹನ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ: ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ – ಭದ್ರಾವತಿ ಪೊಲೀಸರ ಚಾಣಾಕ್ಷ ತನಿಖೆಗೆ ದೊರೆತ ಐತಿಹಾಸಿಕ ಜಯ,.!

ಶಿವಮೊಗ್ಗ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ: 24 ಗಂಟೆಯೊಳಗೆ ಸರಗಳ್ಳರ ಬಂಧನ

“ನೈಟಿ ಧರಿಸಿದ್ದಕ್ಕೆ ಕೋಪ: ಹೆಂಡತಿಯನ್ನು ಜೀವಂತ ಸುಟ್ಟ ಪತಿ”

ನಟ ದುನಿಯಾ ವಿಜಯ್ ಸೇರಿದಂತೆ ಹಲವು ಮಂದಿ ಶೇರ್ ಮಾಡಿದ ಝಾಂಬಿ ಡ್ರಗ್ ಸುಳ್ಳು ವಿಡಿಯೋ ಪ್ರಕರಣ: ವೈರಲ್ ಮಾಡಿದವರ ವಿರುದ್ಧ ಕ್ರಮಕ್ಕೆ ಪೊಲೀಸ್ ಆಯುಕ್ತರ ಎಚ್ಚರಿಕೆ

“ಭದ್ರಾವತಿಯಲ್ಲಿ ಸಾಲದ ಕಿರುಕುಳಕ್ಕೆ ಜೀವ ಬಲಿ,.! 5 ವರ್ಷಗಳ ಬಳಿಕ ಆರೋಪಿತರಿಗೆ 10 ವರ್ಷ ಜೈಲು”

ಹನುಮಂತಪುರದಲ್ಲಿ ಬೆಚ್ಚಿಬೀಳಿಸಿದ ಘಟನೆ: ಅಡಕೆ ತೋಟದಲ್ಲಿ ಉರಿದುಹೋದ ಜೀವ – ಶಿವಮೊಗ್ಗ ಉಪನ್ಯಾಸಕರ ರಹಸ್ಯ ಸಾವು, ಕೊಲೆ ಶಂಕೆ‌,.!

Leave a Comment