ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಧರ್ಮ ವೃಕ್ಷದ ತಾಯಿಯಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು: ಶ್ರೀ ರಂಭಾಪುರಿ ಜಗದ್ಗುರು

On: March 1, 2026 10:51 PM
Follow Us:

ಬಾಳೆಹೊನ್ನೂರು : ವಿಶ್ವ ಬಂಧುತ್ವದ ಸಂದೇಶವನ್ನು ಸಾರಿದ ವೀರಶೈವ ಧರ್ಮದ ಆದ್ಯಾಚಾರ್ಯರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವರು ಧರ್ಮ ವೃಕ್ಷದ ತಾಯಿಯಾಗಿ ಮಾನವಕುಲಕ್ಕೆ ಅಮೂಲ್ಯ ಜೀವನ ದರ್ಶನವನ್ನು ನೀಡಿದ್ದಾರೆ ಎಂದು ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಭಾನುವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಶಿವಾದ್ವೈತ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

“ಧರ್ಮಾಚರಣೆ ಜೀವನದ ಉತ್ಕರ್ಷಕ್ಕೆ ಮೂಲಾಧಾರ. ಅರಿತು ಬಾಳುವುದರಿಂದ ಜೀವನದಲ್ಲಿ ಶಾಂತಿ ಮತ್ತು ಸುಖ ನೆಲೆಸುತ್ತದೆ. ಸತ್ಯ ಸಾಕ್ಷಾತ್ಕಾರ ಪಡೆದ ಪರಮಾಚಾರ್ಯರಾದ ರೇಣುಕಾಚಾರ್ಯರು ಮಾನವೀಯ ಮೌಲ್ಯಗಳನ್ನು ಪ್ರತಿಷ್ಠಾಪಿಸಿ, ಜಾತಿ-ಮತ ಭೇದಗಳನ್ನು ಮೀರಿ ಸಮಾನತೆಯ ಸಂದೇಶವನ್ನು ನೀಡಿದ್ದಾರೆ,” ಎಂದು ಜಗದ್ಗುರುಗಳು ಹೇಳಿದರು.

ಜೀವ ಶಿವನಾಗುವ, ಅಂಗ ಲಿಂಗವಾಗುವ ಆತ್ಮತತ್ತ್ವದ ಮಹತ್ವವನ್ನು ಬೋಧಿಸಿದ ರೇಣುಕಾಚಾರ್ಯರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಳಮೂರ್ತಿ ಪ್ರತಿಷ್ಠಾಪನೆಗೆ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ಬಾಳೆಹೊನ್ನೂರು–ಶ್ರೀ ರಂಭಾಪುರಿ ಪೀಠ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಶಿವಾದ್ವೈತ ಸಿದ್ಧಾಂತವು ಮಾನವ ಧರ್ಮಕ್ಕೆ ಜಯ ತಂದುಕೊಡುತ್ತದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಾಧ್ಯ,” ಎಂದರು. ರಂಭಾಪುರಿ ಪೀಠದ ಆಧ್ಯಾತ್ಮಿಕ ಪರಂಪರೆ ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶಕವಾಗಿದೆ ಎಂದು ಶ್ಲಾಘಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, “ವೀರಶೈವ ಪಂಚಪೀಠಗಳು ರಾಷ್ಟ್ರಗುರು ಪೀಠಗಳಾಗಿವೆ. ರೇಣುಕಾಚಾರ್ಯರಿಂದ ಸ್ಥಾಪಿತವಾದ ರಂಭಾಪುರಿ ಪೀಠವು ಸಾಮರಸ್ಯ ಮತ್ತು ಸೌಹಾರ್ದತೆಯ ಪ್ರತೀಕ,” ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, “ಸಕಲ ಜೀವಿಗಳ ಒಳಿತಿಗಾಗಿ ಬದುಕುವುದೇ ಮಹಾತ್ಮರ ಜೀವನ ಗುರಿ. ರೇಣುಕಾಚಾರ್ಯರು ಹಿಂದೂ ಸಂಸ್ಕೃತಿಯನ್ನು ಬೆಳೆಸಿದ ಮಹಾನ್ ಚೇತನ,” ಎಂದರು.

ಸಾಹಿತ್ಯ ಸಂಶೋಧಕರಾದ ರವಿ ಹಂಜ ಅವರಿಗೆ “ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿ” ಪ್ರದಾನ ಮಾಡಲಾಯಿತು. ವೀರಶೈವ ಪರಂಪರೆಯ ಗ್ರಂಥ ಬಿಡುಗಡೆ, ಗುರುರಕ್ಷೆ ವಿತರಣೆ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮಗಳು ನಡೆದವು.

ಸಮಾರಂಭದ ನಂತರ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಡಗರದಿಂದ ಜರುಗಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭರತನಾಟ್ಯ ಪ್ರದರ್ಶನ ಹಾಗೂ ಭಕ್ತರ ಮಹಾ ಸಂಗಮ ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿತು.

ಈ ಭವ್ಯ ಸಮಾರಂಭದಲ್ಲಿ ವಿವಿಧ ಸಚಿವರು, ಶಾಸಕರು, ಸಂಸದರು ಹಾಗೂ ಮಠಾಧೀಶರು ಉಪಸ್ಥಿತರಿದ್ದರು. ರಂಭಾಪುರಿ ಪೀಠದಲ್ಲಿ ನಡೆದ ಈ ಜಯಂತಿ ಉತ್ಸವವು ಧರ್ಮ, ಸಂಸ್ಕೃತಿ ಮತ್ತು ಸಮಾಜಸೇವೆ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಪ್ರತಿಪಾದಿಸಿತು.

K.M.Sathish Gowda

Join WhatsApp

Join Now

Facebook

Join Now

Read more

ಎಲ್ಲಾ ಸಮಾಜಗಳಿಗೆ ನೆರಳು ಹಾಗೂ‌ ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ: ಬಿ.ವೈ ವಿಜಯೇಂದ್ರ

ಚಿಕ್ಕಮಗಳೂರಿನಲ್ಲಿ ಬಸವತತ್ವ ಸುವರ್ಣ ಮಹೋತ್ಸವ ಸಂಭ್ರಮ; ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿಗೆ ವಿಜಯೇಂದ್ರ ಕರೆ

🌸 ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ 🌸

‘ಇಷ್ಟಲಿಂಗ ದೀಕ್ಷೆಗೆ ವರ್ಣ–ವರ್ಗ ಭೇದವಿಲ್ಲ’: ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರುಗಳಿಂದ ಪಶ್ಚಿಮ ಬಂಗಾಳದ ಯುವಕರಿಗೆ ಇಷ್ಟಲಿಂಗ ದೀಕ್ಷೆ

ಅಟ್ಲಾಂಟಿಕ್ ಸಾಗರವನ್ನು ಮೂರು ಸಾವಿರ ಮೈಲು ಏಕಾಂಗಿಯಾಗಿ ದಾಟಿದ ಕನ್ನಡತಿ: ನಾಳೆ ಬೆಂಗಳೂರು ತರಳಬಾಳು ಕೇಂದ್ರದಲ್ಲಿ ‘ತೊರೆಯ ಹಂಬಲ’ ಅಭಿನಂದನಾ ಸಮಾರಂಭ

ಚಿಕ್ಕಮಗಳೂರಿನಲ್ಲಿ ಶ್ರೀ ಬಸವತತ್ವ ಪೀಠದ ಸುವರ್ಣ ಮಹೋತ್ಸವ: 2026ರ ಫೆಬ್ರವರಿ 24ರಿಂದ 28ರವರೆಗೆ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರ ನೇತೃತ್ವದಲ್ಲಿ ಬಸವತತ್ವ ಸಮಾವೇಶ

Leave a Comment